ಬ್ಯಾಂಕಿಗೆ ವಂಚನೆ ಆರೋಪ: ಪ್ರಣಯ್ ರಾಯ್ ಮನೆ ಮೇಲೆ ಸಿಬಿಐ ದಾಳಿ, ಕೇಸು ದಾಖಲು

ಎನ್ ಡಿಟಿವಿ ಸುದ್ದಿ ವಾಹಿನಿಯ ಸಹ ಸಂಸ್ಥಾಪಕ ಮತ್ತು ಕಾರ್ಯಕಾರಿ ಸಹ ಅಧ್ಯಕ್ಷ ಪ್ರಣಯ್ ರಾಯ್...
ಪ್ರಣಯ್ ರಾಯ್
ಪ್ರಣಯ್ ರಾಯ್
ನವದೆಹಲಿ:  ಎನ್ ಡಿಟಿವಿ ಸುದ್ದಿ ವಾಹಿನಿಯ ಸಹ ಸಂಸ್ಥಾಪಕ ಮತ್ತು ಕಾರ್ಯಕಾರಿ ಸಹ ಅಧ್ಯಕ್ಷ ಪ್ರಣಯ್ ರಾಯ್ಅವರ ಡೆಹ್ರಾಡೂನ್ ನಲ್ಲಿರುವ ಮನೆ ಮೇಲೆ ಇಂದು ಬೆಳಗ್ಗೆ ದಾಳಿ ನಡೆಸಿದ ಕೇಂದ್ರ ತನಿಖಾ ಸಂಸ್ಥೆ(ಸಿಬಿಐ)  ಶೋಧ ಕಾರ್ಯ ನಡೆಸಿದೆ.
ಪ್ರಣಯ್ ರಾಯ್, ಅವರ ಪತ್ನಿ ರಾಧಿಕಾ ರಾಯ್, ಖಾಸಗಿ ಕಂಪೆನಿ ಮತ್ತು ಇತರರು ಬ್ಯಾಂಕಿಗೆ ಅಪಾರ ನಷ್ಟವುಂಟು ಮಾಡಿದ್ದಾರೆ ಎಂದು ಆರೋಪಿಸಿ ಸಿಬಿಐ ಇಂದು ಕೇಸು ದಾಖಲಿಸಿದೆ. 
ದೆಹಲಿ ಮತ್ತು ಡೆಹ್ರಾಡೂನ್ ಸೇರಿದಂತೆ ನಾಲ್ಕು ಕಡೆಗಳಲ್ಲಿ ಸಿಬಿಐ ಶೋಧ ನಡೆಸಿದೆ.
ಐಸಿಐಸಿಐ ಬ್ಯಾಂಕಿಗೆ 48 ಕೋಟಿ ರೂಪಾಯಿ ನಷ್ಟವುಂಟುಮಾಡಿದ್ದಾರೆ ಎಂದು ಕೇಸು ದಾಖಲಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ದೆಹಲಿ ಮತ್ತು ಡೆಹ್ರಾಡೂನ್ ನ 4 ಕಡೆಗಳಲ್ಲಿ ಸಿಬಿಐ ಶೋಧ ನಡೆಸುತ್ತಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com