ವಿಚಾರಣೆಗೆ ಗೈರು: ಯೋಗ ಗುರು ರಾಮ್'ದೇವ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

'ಭಾರತ್ ಮಾತಾ ಕಿ ಜೈ' ಹೇಳದವರ ರುಂಡ ಕಡಿಯುತ್ತೇನೆಂದು ಹೇಳಿ ವಿವಾದ ಸೃಷ್ಟಿಸಿದ್ದ ಯೋಗ ಗುರು ಬಾಬಾ ರಾಮ್'ದೇವ್ ವಿರುದ್ದ ನ್ಯಾಯಾಲಯ ಜಾಮೀನು ರಹಿತ...
ಯೋಗ ಗುರು ಬಾಬಾ ರಾಮ್'ದೇವ್
ಯೋಗ ಗುರು ಬಾಬಾ ರಾಮ್'ದೇವ್
ರೊಹ್ಟಕ್; 'ಭಾರತ್ ಮಾತಾ ಕಿ ಜೈ' ಹೇಳದವರ ರುಂಡ ಕಡಿಯುತ್ತೇನೆಂದು ಹೇಳಿ ವಿವಾದ ಸೃಷ್ಟಿಸಿದ್ದ ಯೋಗ ಗುರು ಬಾಬಾ ರಾಮ್'ದೇವ್ ವಿರುದ್ದ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. 
ಕೆಲ ದಿನಗಳ ಹಿಂದಷ್ಟೇ ಬಾಬ್ ರಾಮ್ ದೇವ್ ಅವರು 'ಭಾರತ್ ಮಾತಾ ಕಿ ಜೈ' ಎನ್ನದವರ ರುಂಡ ಕಡಿಯುತ್ತೇನೆಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಕಷ್ಟು ವಿವಾದವನ್ನು ಹುಟ್ಟು ಹಾಕಿತ್ತು. ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಹರಿಯಾಣ ಮಾಜಿ ಗೃಹ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸುಭಾಷ್ ಬಾತ್ರಾ ಅವರು ರಾಮ್'ದೇವ್ ವಿರುದ್ದ ಪ್ರಕರಣ ದಾಖಲಿಸಿದ್ದರು. 
ಪ್ರಕರಣ ಸಂಬಂಧ ಈ ಹಿಂದೆ ವಿಚಾರಣೆ ನಡೆಸಿದ್ದ ರೊಹ್ಟಕ್ ನ್ಯಾಯಾಲಯ ಮುಂದಿನ ವಿಚಾರಣೆಗೆ ಸ್ವತಃ ಹಾಜರಾಗುವಂತೆ ಸೂಚಿಸಿ ಜಾಮೀನು ಸಹಿತ ವಾರೆಂಟ್ ಜಾರಿ ಮಾಡಿತ್ತು. ನ್ಯಾಯಾಲಯ ಆದೇಶ ನೀಡಿದ್ದರೂ ರಾಮ್'ದೇವ್ ಅವರು ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ನ್ಯಾಯಾಲಯ ಇದೀಗ ಜಾಮೀನು ರಹಿತ ವಾರೆಂಟ್'ನ್ನು ಜಾರಿ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com