ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ಬಾಲಕಿಯರ ತಂದೆ ಚುಂಚುನ್ ಸಾ, ನಿನ್ನೆ ಮಕ್ಕಳನ್ನು ಕರೆದುಕೊಂಡು ಬರಲೆಂದು ಶಾಲೆಗೆ ಹೋದಾಗ ಶಿಕ್ಷಕಿಯನ್ನು ಭೇಟಿಯಾಗುವಂತೆ ಹೇಳಲಾಗಿತ್ತು.ಶಿಕ್ಷಕಿಯನ್ನು ಭೇಟಿ ಮಾಡಿದಾಗ ಯೂನಿಫಾರ್ಮ್ ಶುಲ್ಕ ಪಾವತಿಸುವಂತೆ ಹೇಳಿದರು. ಸ್ವಲ್ಪ ಸಮಯಾವಕಾಶ ನೀಡುವಂತೆ ಕೇಳಿದ್ದೆ. ಆದರೆ ಮರುದಿನ ಮಕ್ಕಳು ಶಾಲೆಗೆ ಹೋದಾಗ ಎಲ್ಲರೆದುರೇ ಯೂನಿಫಾರ್ಮ್ ಬಿಚ್ಚಿ ಶಾಲೆಯಿಂದ ಹೊರಹಾಕಿದರು. ಈ ಬಗ್ಗೆ ಶಾಲೆಯ ಪ್ರಾಂಶುಪಾಲರಿಗೆ ದೂರು ನೀಡಿದ್ದಕ್ಕೆ ಅವರು ಸ್ಪಂದಿಸಲಿಲ್ಲ. ಅದಕ್ಕಾಗಿ ಪೊಲೀಸರಿಗೆ ದೂರು ನೀಡಿದೆ ಎಂದು ಬಾಲಕಿಯರ ತಂದೆ ಹೇಳಿದ್ದಾರೆ.