ಪುಣೆ: ಭ್ರಷ್ಟಾಚಾರ ಆರೋಪದ ಮೇಲೆ ಸೇನಾ ಕರ್ನಲ್ ಸೇರಿ ನಾಲ್ವರ ಬಂಧನ

50 ಸಾವಿರ ರುಪಾಯಿ ಲಂಚ ಪಡೆದ ಆರೋಪದ ಮೇಲೆ ಭಾರತೀಯ ಸೇನೆಯ ಕರ್ನಲ್ ಹಾಗೂ ಇತರೆ ಮೂವರನ್ನು ಸೋಮವಾರ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪುಣೆ: 50 ಸಾವಿರ ರುಪಾಯಿ ಲಂಚ ಪಡೆದ ಆರೋಪದ ಮೇಲೆ ಭಾರತೀಯ ಸೇನೆಯ ಕರ್ನಲ್ ಹಾಗೂ ಇತರೆ ಮೂವರನ್ನು ಸೋಮವಾರ ಸಿಬಿಐ ಅಧಿಕಾರಿಗಳು ಪುಣೆಯಲ್ಲಿ ಬಂಧಿಸಿದ್ದಾರೆ.
ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸೇನಾ ಕರ್ನಲ್ ಹಾಗೂ ಇತರೆ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ, ಇಂದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಬಳಿಕ ಕೋರ್ಟ್ ಗೆ ಹಾಜರುಪಡಿಸುತ್ತಿದೆ.
ಸೇನೆಯ ವಿವಿಧ ಸ್ಥಳಗಳಲ್ಲಿ ಬಳಸಲ್ಪಡುವ ಬಂಡೆ ಹೊಡೆಯುವ ಯಂತ್ರ ಖರೀದಿ ಸಂಬಂಧ ಖಾಸಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ನಿರ್ದೇಶಕರಿಂದ 1.80 ಲಕ್ಷ ರುಪಾಯಿ ಲಂಚಕ್ಕೆ ಕರ್ನಲ್ ಬೇಡಿಕೆಯಿಟ್ಟಿದ್ದರು. 
ಕಳೆದ ಫೆಬ್ರವರಿಯಲ್ಲಿ 50 ಸಾವಿರ ರುಪಾಯಿ ಮುಂಗಡವಾಗಿ ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com