ಕೇರಳ ಪ್ರವಾಸ ವೇಳೆ ಪ್ರಧಾನಿ ಮೋದಿಗೆ ಉಗ್ರರಿಂದ ಬೆದರಿಕೆ

ಕೇರಳಾಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದ ವೇಳೆ ಅವರಿಗೆ ಉಗ್ರರಿಂದ ಬೆದರಿಕೆಯಿತ್ತು ಎಂದು ಪೊಲೀಸ್ ಮುಖ್ಯಸ್ಥ ...
ಮೆಟ್ರೋ ಉದ್ಘಾಟನೆ ನಂತರ ರೈಲಿನಲ್ಲಿ ಪಿಎಂ ಸಂಚಾರ
ಮೆಟ್ರೋ ಉದ್ಘಾಟನೆ ನಂತರ ರೈಲಿನಲ್ಲಿ ಪಿಎಂ ಸಂಚಾರ
ಕೊಚ್ಚಿ: ಕೇರಳಾಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದ ವೇಳೆ ಅವರಿಗೆ ಉಗ್ರರಿಂದ ಬೆದರಿಕೆಯಿತ್ತು ಎಂದು ಪೊಲೀಸ್ ಮುಖ್ಯಸ್ಥ ಟಿಪಿ ಸೆಂಕುಮಾರ್ ಹೇಳಿದ್ದಾರೆ
ಶನಿವಾರ ಕೇರಳಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ವೇಳೆ ಅವರಿಗೆ ಉಗ್ರರಿಂದ ಭಾರೀ ಬೆದರಿಕೆಯಿತ್ತು. ಹೀಗಾಗಿ ನಾವು ಹೆಚ್ಚಿನ ಮಾಹಿತಿಯನ್ನು  ನೀಡಲು ಸಾಧ್ಯವಿಲ್ಲ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದೇ ವೇಳೆ ಸಚಿವ ಸಂಪುಟದ ಸಭೆಯ ನಂತರ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪ್ರಧಾನಿ ಅವರಿಗೆ ಉಗ್ರರ ಬೆದರಿಕೆ ಇದ್ದದ್ದು ನಿಜ.  ಆದರೆ ಈ ವಿಷಯವನ್ನು ನಾವು ಸಾರ್ವಜನಿಕವಾಗಿ ಬಹಿರಂಗ ಪಡಿಸಿಲ್ಲ ಎಂದು ಹೇಳಿದರು.
ಕೊಚ್ಚಿಯ ಮೆಟ್ರೋ ರೈಲಿನ ಮೊದಲ ಹಂತದ ರೈಲು ಸಂಚಾರವನ್ನು ಶನಿವಾರ ಮೋದಿ ಬಿಗಿ ಭದ್ರತೆಯಲ್ಲಿ ಉದ್ಘಾಟಿಸಿದರು. ಜೊತೆಗೆ ಮೆಟ್ರೋ ರೈಲಿನಲ್ಲಿ ಸ್ವಲ್ಪ ದೂರ ಸಂಚರಿಸಿದರು. ಈ ವೇಳೆ ಕೇರಳ ಸಿಎಂ ಪಿಣರಾಯಿ ವಿಜಯನ್, ಗವರ್ನರ್ ಪಿ. ಸದಾಶಿವಂ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹಾಜರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com