ನಮ್ಮ ಗೆಲವು, ಜನತೆಯ ಗೆಲುವಾಗಲಿದೆ: ಉತ್ತರಾಖಂಡ ಮುಖ್ಯಮಂತ್ರಿ ರಾವತ್

ಉತ್ತರಾಖಂಡ್ ರಾಜ್ಯದಲ್ಲಿ ಕಾಂಗ್ರೆಸ ಸ್ಪಷ್ಟ ಬಹುಮತದ ಮೂಲಕ ಗೆಲವು ಸಾಧಿಸಲಿದ್ದು, ನಮ್ಮ ಗೆಲವು ಜನತೆಯ ಗೆಲುವಾಗಲಿದೆ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಹೇಳಿದ್ದಾರೆ...
ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್
ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್
Updated on

ಡೆಹ್ರಾಡುನ್: ಉತ್ತರಾಖಂಡ್ ರಾಜ್ಯದಲ್ಲಿ ಕಾಂಗ್ರೆಸ ಸ್ಪಷ್ಟ ಬಹುಮತದ ಮೂಲಕ ಗೆಲವು ಸಾಧಿಸಲಿದ್ದು, ನಮ್ಮ ಗೆಲವು ಜನತೆಯ ಗೆಲುವಾಗಲಿದೆ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಹೇಳಿದ್ದಾರೆ. 

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬೀಳುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಉತ್ತರಾಖಂಡ ರಾಜ್ಯದಲ್ಲಿ ಸ್ಪಷ್ಟ ಬಹುಮತದ ಮೂಲಕ ಕಾಂಗ್ರೆಸ್ ರಚನೆ ಮಾಡಲಿದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ. ಖಂಡಿತವಾಗಿಯೂ ನಾವು ಗೆಲವು ಸಾಧಿಸುತ್ತೇವೆಂದು ಹೇಳಿದ್ದಾರೆ.

ನನ್ನ ಕರ್ತವ್ಯವನ್ನು ಉತ್ತಮವಾಗಿ ಪಾಲಿಸಲು ಹಾಗೂ ಜನತೆಗೆ ಉತ್ತಮ ರೀತಿಯಲ್ಲಿ ಕೆಲ ಮಾಡಬೇಕೆಂದು ಪ್ರತೀನಿತ್ಯ ನಾನು ಎರಡು ಬಾರಿಯಾದರೂ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ನನ್ನಂತಹ ದುರ್ಬಲ ಹಾಗೂ ಬೆಂಬಲವಿಲ್ಲದ ಜನರು ಗೆಲವು ಸಾಧಿಸುತ್ತಾರೆ. ಏಕೆಂದರೆ, ನನಗೆ ಜನರ ಬೆಂಬಲವಿದೆ. ನಮ್ಮ ಈ ಗೆಲವು ಯಾವುದೇ ಸಂಪನ್ಮೂಲಗಳು ಹಾಗೂ ಆಧಾರವಿಲ್ಲದೆಯೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ಗೆಲುವಾಗಲಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com