ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬೀಳುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಉತ್ತರಾಖಂಡ ರಾಜ್ಯದಲ್ಲಿ ಸ್ಪಷ್ಟ ಬಹುಮತದ ಮೂಲಕ ಕಾಂಗ್ರೆಸ್ ರಚನೆ ಮಾಡಲಿದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ. ಖಂಡಿತವಾಗಿಯೂ ನಾವು ಗೆಲವು ಸಾಧಿಸುತ್ತೇವೆಂದು ಹೇಳಿದ್ದಾರೆ.
ನನ್ನ ಕರ್ತವ್ಯವನ್ನು ಉತ್ತಮವಾಗಿ ಪಾಲಿಸಲು ಹಾಗೂ ಜನತೆಗೆ ಉತ್ತಮ ರೀತಿಯಲ್ಲಿ ಕೆಲ ಮಾಡಬೇಕೆಂದು ಪ್ರತೀನಿತ್ಯ ನಾನು ಎರಡು ಬಾರಿಯಾದರೂ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ನನ್ನಂತಹ ದುರ್ಬಲ ಹಾಗೂ ಬೆಂಬಲವಿಲ್ಲದ ಜನರು ಗೆಲವು ಸಾಧಿಸುತ್ತಾರೆ. ಏಕೆಂದರೆ, ನನಗೆ ಜನರ ಬೆಂಬಲವಿದೆ. ನಮ್ಮ ಈ ಗೆಲವು ಯಾವುದೇ ಸಂಪನ್ಮೂಲಗಳು ಹಾಗೂ ಆಧಾರವಿಲ್ಲದೆಯೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ಗೆಲುವಾಗಲಿದೆ ಎಂದು ತಿಳಿಸಿದ್ದಾರೆ.