ಮಹಾರಾಷ್ಟ್ರ ಹೋಳಿ ಹಬ್ಬ ಆಚರಣೆ ವೇಳೆ ಅವಘಡ; ಸೇತುವೆ ಕುಸಿದು 12 ಮಂದಿಗೆ ಗಾಯ

ಮಹಾರಾಷ್ಟ್ರದಲ್ಲಿ ಹೋಳಿಹಬ್ಬ ಆಚರಣೆ ವೇಳೆ ದುರಂತ ಸಂಭವಿಸಿದ್ದು, ಸೇತುವೆ ಕುಸಿದ ಪರಿಣಾಮ 12 ಮಂದಿ ಗಾಯಗೊಂಡ ಘಟನೆ ಸಂಭವಿಸಿದೆ.
ಕುಸಿದ ಸೇತುವೆ
ಕುಸಿದ ಸೇತುವೆ

ರತ್ನಗಿರಿ: ಮಹಾರಾಷ್ಟ್ರದಲ್ಲಿ ಹೋಳಿಹಬ್ಬ ಆಚರಣೆ ವೇಳೆ ದುರಂತ ಸಂಭವಿಸಿದ್ದು, ಸೇತುವೆ ಕುಸಿದ ಪರಿಣಾಮ 12 ಮಂದಿ ಗಾಯಗೊಂಡ ಘಟನೆ ಸಂಭವಿಸಿದೆ.

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕಲಾಂಬುಷಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಕಾಮದಹನ ಕಾರ್ಯಕ್ರಮಕ್ಕೂ ಮುನ್ನ ನಡೆದ ಮೆರವಣಿಗೆ ವೇಳೆ ಗ್ರಾಮದಲ್ಲಿನ ಸೇತುವೆ ಕುಸಿದ ಪರಿಣಾಮ 12 ಮಂದಿ ಗ್ರಾಮಸ್ಥರು  ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 25ಕ್ಕೂ ಹೆಚ್ಚು ಮಂದಿ ಕಾಲುವೆಗೆ ಅಡ್ಡಲಾಗಿ ಕಟ್ಟಲಾಗಿದ್ದ ಕಬ್ಬಿಣದ ಸೇತುವೆ ಮೇಲೆ ಏಕಕಾಲಕ್ಕೆ ನಡೆದ ಪರಿಣಾಮ ಜನರ ತೂಕ ತಾಳದೇ ಸೇತುವೆ ಕುಸಿದಿದೆ ಎಂದು  ತಿಳಿದುಬಂದಿದೆ.

ಪ್ರಸ್ತುತ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com