ಟ್ವೀಟ್ ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಶರ್ಮಿಷ್ಠಾ ಮುಖರ್ಜಿ, ಪ್ರಣಬ್ ಮುಖರ್ಜಿಯವರು ಇಂದಿನ ಭಾರತದ ರಾಷ್ಟ್ರಪತಿಗಳಾಗಿರುವುದರಿಂದ ಅವರ ಹೆಸರಿನ ಮೊದಲು ಶ್ರೀ ಸೇರಿಸುವ ಕನಿಷ್ಟ ಸೌಜನ್ಯವಾದರೂ ಇರಲಿ ಎಂದು ಬರೆದು ಪೋಸ್ಟ್ ಮಾಡಿದ್ದರು. ಟ್ವೀಟ್ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಅದನ್ನು ಅಳಿಸಿತು. ಕಾಂಗ್ರೆಸ್ ನ ಪುಟ ತೆರೆದರೆ ಪುಟ ಸಿಗುವುದಿಲ್ಲ ಎಂಬ ಸಂದೇಶ ಬರುತ್ತದೆ. ಆದರೆ ಅಷ್ಟರಲ್ಲೇ ಕೆಲವರು ಅದರ ಸ್ಕ್ರೀನ್ ಶಾಟ್ ತೆಗೆದು ಪೋಸ್ಟ್ ಮಾಡಿದ್ದರು.ನಂತರ ಆಗಿರುವ ಪ್ರಮಾದವನ್ನು ತಿದ್ದಿಕೊಂಡಿರುವ ಕಾಂಗ್ರೆಸ್ ಪ್ರಣಬ್ ಮುಖರ್ಜಿಯವರ ಹೆಸರಿನ ಮೊದಲು ಶ್ರೀ ಸೇರಿಸಿದೆ.