ಲಖನೌ: ಉತ್ತರ ಪ್ರದೇಶದ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಮಾಡಲು ಹಕ್ಕು ಮಂಡಿಸಿರುವ ನಿಯೋಜಿತ ಸಿಎಂ ಯೋಗಿ ಆದಿತ್ಯನಾಥ್ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, (ಎಲ್ಲರ ಜೊತೆಗೂ ಎಲ್ಲರ ವಿಕಾಸ) ಎಂಬುದೇ ತಮ್ಮ ಆಡಳಿತದ ಮಂತ್ರ ಎಂಬ ಹೇಳಿಕೆ ನೀಡಿದ್ದು, ಮೋದಿ ಹಾದಿಯಲ್ಲೇ ಸಾಗುವ ನಿರೀಕ್ಷೆ ಮೂಡಿಸಿದ್ದಾರೆ.