ಭಾರತ-ಬಾಂಗ್ಲಾದೇಶ ಜಂಟಿ ಸೇನಾ ಸೈಕಲ್ ಯಾತ್ರೆಗೆ ಅಗರ್ತಲದಲ್ಲಿ ಹಸಿರು ನಿಶಾನೆ

ಪರಸ್ಪರ ಸ್ನೇಹ, ಸೌಹಾರ್ದತೆ ಕಾಯ್ದುಕೊಳ್ಳಲು ಭಾರತ ಮತ್ತು ಬಾಂಗ್ಲಾದೇಶ ಸೇನಾ...
ಸೈಕಲ್ ಯಾತ್ರೆಗೆ ಸಿದ್ಧತೆ
ಸೈಕಲ್ ಯಾತ್ರೆಗೆ ಸಿದ್ಧತೆ
ಅಗರ್ತಲ(ತ್ರಿಪುರಾ): ಪರಸ್ಪರ ಸ್ನೇಹ, ಸೌಹಾರ್ದತೆ ಕಾಯ್ದುಕೊಳ್ಳಲು ಭಾರತ ಮತ್ತು ಬಾಂಗ್ಲಾದೇಶ ಸೇನಾ ಯೋಧರು ಜಂಟಿ ಸೈಕಲ್ ದಂಡ ಯಾತ್ರೆಯನ್ನು ಕೈಗೊಂಡಿದ್ದಾರೆ. ಇದಕ್ಕೆ ಇತ್ತೀಚೆಗೆ ಅಗರ್ತಲಾದ ಮಿಲಿಟರಿ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಲಾಯಿತು.
ಲೆಫ್ಟಿನೆಂಟ್ ಜನರಲ್ ಎ.ಎಸ್.ಬೇಡಿ, ಗೊಕ್ ಗಜ್ರಾಜ್ ಕಾರ್ಪ್ಸ್, ಯಾತ್ರೆಗೆ ಚಾಲನೆ ನೀಡಿದರು. ಇತಿಹಾಸ, ಭೌಗೋಳಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ತುಂಬಾ ಸಾಮೀಪ್ಯದ ಸಂಬಂಧ ಹಂಚಿಕೊಳ್ಳುತ್ತಿದೆ. ಮಿಲಿಟರಿಯ ಹಿರಿಯ ಅಧಿಕಾರಿಗಳು ಮತ್ತು ತರಬೇತಿ ನೆಲೆಯಲ್ಲಿ ಎರಡೂ ಸೇನೆಗಳು ಪರಸ್ಪರ ಮಾತುಕತೆ, ಚರ್ಚೆ ನಡೆಸುತ್ತವೆ. ಈ ಯಾತ್ರೆಯು ಎರಡೂ ಕಡೆಯ ಸೇನೆಗಳು ತೆಗೆದುಕೊಂಡ ಆಸಕ್ತಿಕರವಾದ ಅಭಿಯಾನವಾಗಿದ್ದು, 1971ರ ವಿಮೋಚನಾ ಯುದ್ಧವನ್ನು ನೆನಪಿಸುತ್ತದೆ ಮತ್ತು ಎರಡೂ ಸೇನೆಗಳ ಸಿಬ್ಬಂದಿ ಪರಸ್ಪರ ಕಲಿಯಲು ಸಹಾಯವಾಗುತ್ತದೆ ಎಂದು ಹೇಳಿದರು.
ಭಾರತ ಮತ್ತು ಬಾಂಗ್ಲಾದೇಶಗಳ ಸೇನಾ ಯೋಧರು ಒಟ್ಟಿಗೆ ಹೀಗೆ ದಂಡಯಾತ್ರೆ ಕೈಗೊಳ್ಳುತ್ತಿರುವುದು ಇದೇ ಮೊದಲು. ದಂಡಯಾತ್ರೆ ತಂಡದಲ್ಲಿ 19 ಮಂದಿ ಸೈನಿಕರು, ಅಧಿಕಾರಿಗಳು, ಜೆಸಿಒಗಳು ಮತ್ತು ಒಆರ್ ಗಳು ಸೇರಿದ್ದಾರೆ. 11 ದಿನಗಳಲ್ಲಿ 532 ಕಿಲೋ ಮೀಟರ್ ದೂರ ಸಂಚರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com