ಯುವಕನ ಜೀವ ತೆಗೆದ ಆನ್ ಲೈನ್ ಜೂಜಿನ ಗೀಳು

ಆನ್ ಲೈನ್ ಜೂಜು ತಾಣ ರಮ್ಮಿ ಸರ್ಕಲ್ ನಲ್ಲಿ ಸಾಕಷ್ಟು ಹಣ ಕಳೆದುಕೊಂಡು ಮಾನಸಿಕ ಕಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ...
ರಮ್ಮಿ ಸರ್ಕಲ್ ಜಾಹೀರಾತು
ರಮ್ಮಿ ಸರ್ಕಲ್ ಜಾಹೀರಾತು
ವಿಜಯವಾಡ: ಆನ್ ಲೈನ್ ಜೂಜು ತಾಣ ರಮ್ಮಿ ಸರ್ಕಲ್ ನಲ್ಲಿ ಸಾಕಷ್ಟು ಹಣ ಕಳೆದುಕೊಂಡು ಮಾನಸಿಕ ಕಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ಬುಧವಾರ ತನ್ನ ರೂಂನಲ್ಲಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶ ವಿಜಯವಾಡದಲ್ಲಿ ನಡೆದಿದೆ.
ಸೂರ್ಯರಾವ್ ಪೇಟ್ ಪೊಲೀಸ್ ಠಾಣೆಯ ಪೊಲೀಸರ ಪ್ರಕಾರ, ಆತ್ಮಹತ್ಯೆ ಮಾಡಿಕೊಂಡ ಯುವಕ 32 ವರ್ಷ ಉದಯಮಾನ್ ಎಂದು ಗುರುತಿಸಲಾಗಿದ್ದು, ಕೇರಳ ಮೂಲದ ಈ ಯುವಕ ನಗರದ ಖಾಸಗಿ ಆಸ್ಪತ್ರೆಯೊಂದಲ್ಲಿ ಲ್ಯಾಬ್ ಟೆಕ್ನಿಸಿಯನ್ ಆಗಿ ಕೆಲಸ ಮಾಡುತ್ತಿದ್ದ.
ಸೂರ್ಯರಾವ್ ಪೇಟ್ ಪ್ರದೇಶದಲ್ಲಿ ತನ್ನ ಇತರೆ ಮೂವರು ಸಹದ್ಯೋಗಿಗಳೊಂದಿಗೆ ವಾಸಿಸುತ್ತಿದ್ದ ಉದಯಮಾನ್, ರಮ್ಮಿ ಸರ್ಕಲ್ ನಲ್ಲಿ ಜೂಜು ಆಡುವ ಗೀಳು ಹತ್ತಿಸಿಕೊಂಡಿದ್ದ ಎನ್ನಲಾಗಿದೆ.
ಉದಯಮಾನ್ ತಾನು ಸಂಪಾದಿಸಿದ ಎಲ್ಲಾ ಹಣವನ್ನು ಜೂಜು ಆಡಿ ಕಳೆದುಕೊಳ್ಳುತ್ತಿದ್ದ. ಹೀಗಾಗಿ ಕೆಲವು ಬಾರಿ ರೂಮ್ ಬಾಡಿಗೆ ಸಹ ಕೊಡುತ್ತಿರಲಿಲ್ಲ. ಅಲ್ಲದೆ ಜೂಜಿಗಾಗಿ ಹಲವರ ಬಳಿ ಸಾಲ ಸಹ ಮಾಡಿದ್ದ ಎಂದು ಆತನ ಸ್ನೇಹಿತರೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com