ಅವರು ಕೇರಳದ ಕೊಚ್ಚಿಯಲ್ಲಿ ಸನ್ಮಾನ ಸಮಾರಂಭವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ. ವಕೀಲ ವೃತ್ತಿಯಲ್ಲಿ 75 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಕೇರಳ ಹೈಕೋರ್ಟ್ ನ ಕ್ರಿಮಿನಲ್ ಲಾಯರ್ಸ್ ಗಳು ಸನ್ಮಾನ ಸಮಾರಂಭವನ್ನು ಆಯೋಜಿಸಿದ್ದರು. ಜೇಠ್ಮಲಾನಿಯವರ ಅನಾರೋಗ್ಯ ಹಿನ್ನಲೆಯಲ್ಲಿ ನಂತರ ಕಾರ್ಯಕ್ರಮ ರದ್ದಾಯಿತು ಎಂದು ವಕೀಲ ಬಾಬು ಎಸ್ ನಾಯರ್ ತಿಳಿಸಿದ್ದಾರೆ.