ಏರ್ ಇಂಡಿಯಾ ಸಿಬ್ಬಂದಿಗೆ ರವೀಂದ್ರ ಗಾಯಗ್ವಾಡ್ ಅವರು ಚಪ್ಪಲಿಯಲ್ಲಿ ಹೊಡೆದ ಪ್ರಕರಣ ಸಂಬಂಧ ನಿನ್ನೆ ಲೋಕಸಭೆಯಲ್ಲಿ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿ ಶಿವಸೇನೆ ಸದಸ್ಯ ಅನಂದ್ ರಾವ್ ಅಬ್ಸುಲ್ ಅವರು, ಗಾಯಕ್ವಾಡ್ ಅವರು ಏರ್ ಇಂಡಿಯಾ ಸಿಬ್ಬಂದಿಗೆ ಹೊಡೆದಿದ್ದಾರೆ. ಇದು ತಪ್ಪು ಎಂಬುದನ್ನು ನಾವೂ ಒಪ್ಪಿಕೊಳ್ಳುತ್ತೇವೆ. ಆದರೆ, ಪ್ರಕರಣ ಸಂಬಂಧ ಏರ್ ಇಂಡಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕಿತ್ತು. ಮುಂದಿನ ಬೆಳವಣಿಗೆ ಹಾಗೂ ಫಲಿತಾಂಶಗಳನ್ನು ನಾವು ಒಪ್ಪಿಕೊಳ್ಳುತ್ತಿದ್ದೆವು. ಇದರಿಂದ ನಮಗೆ ಸಮಸ್ಯೆಯಿರುತ್ತಿರಲಿಲ್ಲ. ಆದರೆ, ಗಾಯಕ್ವಾಡ್ ಅವರಿಗೆ ಏರ್ ಇಂಡಿಯಾ ನಿಷೇಧ ಹೇರಿರುವ ಕ್ರಮ ಸರಿಯಿಲ್ಲ ಎಂದು ಹೇಳಿದ್ದಾರೆ.