ಕೇಜ್ರಿವಾಲ್ ವಿರುದ್ಧದ ಲಂಚ ಆರೋಪ ಕುರಿತಂತೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಪ್ ದೆಹಲಿ ವಕ್ತಾರ ಸಂಜಯ್ ಸಿಂಗ್, ಲಂಚ ಆರೋಪ ಸಂಬಂಧ ಅರವಿಂದ್ ಕೇಜ್ರಿವಾಲ್ ರಾಜಿನಾಮೆ ನೀಡುವ ಪ್ರಶ್ನೆಯೆ ಇಲ್ಲ. ಆಧಾರ ರಹಿತ ಆರೋಪಗಳಿಗೆಲ್ಲಾ ರಾಜಿನಾಮೆ ನೀಡಬೇಕಿಲ್ಲ. ಹಾಗೇ ಎಲ್ಲಾ ಆರೋಪಗಳಿಗೂ ಕೇಜ್ರಿವಾಲ್ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಆಪ್ ಪಕ್ಷ ಅವರ ಬೆಂಬಲಕ್ಕಿದೆ ಎಂದು ಹೇಳಿದ್ದಾರೆ.