ಪಕ್ಷಕ್ಕೆ ಬಂದರೆ ರಜನಿ ಕಾಂತ್ ಗೆ ಸೂಕ್ತ ಸ್ಥಾನಮಾನ: ನಿತಿನ್ ಗಡ್ಕರಿ

ನಟ ರಜನಿಕಾಂತ್ ಅವರು ಪಕ್ಷಕ್ಕೆ ಬಂದರೇ ಅವರಿಗೆ ರಾಜಕೀಯವಾಗಿ ಸ್ವಾಗತಿಸುತ್ತೇನೆ ಎಂದು ಅಮಿತ್ ಶಾ ಹೇಳಿದ ಬೆನ್ನಲ್ಲೇ, ಕೇಂದ್ರ ಸಾರಿಗೆ ಸಚಿವ ನಿತಿನ್ ..
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ
ನವದೆಹಲಿ: ನಟ ರಜನಿಕಾಂತ್ ಅವರು ಪಕ್ಷಕ್ಕೆ ಬಂದರೇ ಅವರಿಗೆ ರಾಜಕೀಯವಾಗಿ ಸ್ವಾಗತಿಸುತ್ತೇನೆ ಎಂದು ಅಮಿತ್ ಶಾ ಹೇಳಿದ ಬೆನ್ನಲ್ಲೇ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡ ರಜನಿಕಾಂತ್ ಅವರನ್ನು ಸ್ವಾಗತಿಸಿದ್ದಾರೆ.
ಟಿವಿ ಚಾನೆಲ್ ವೊಂದರ ಸಂದರ್ಶನದಲ್ಲಿ ಮಾತನಾಡಿದ ಗಡ್ಕರಿ, ಒಂದು ವೇಳೆ ರಜನಿಕಾಂತ್ ಬಿಜೆಪಿ ಗೆ ಬಂದರೇ ಅವರಿಗೆ ಸೂಕ್ತ ಸ್ಥಾನಮಾನ ನೀಡುವುದಾಗಿ ಹೇಳಿದ್ದಾರೆ. 
ರಜನಿಕಾಂತ್ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನ ಇರುತ್ತದೆ ಎಂದಿರುವ ಗಡ್ಕರಿ, ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಪಕ್ಷದ ಅಧ್ಯಕ್ಷರಾಗಿದ್ದ ರಾಜನಾಥ್‌ ಸಿಂಗ್ ಅವರು 2014ರಲ್ಲೇ ರಜನಿಕಾಂತ್ ಅವರನ್ನು ಪಕ್ಷಕ್ಕೆ ಕರೆತರಲು ಯತ್ನಿಸಿದ್ದರು. ರಜನಿ ಒಪ್ಪಿರಲಿಲ್ಲ.
ಆದರೆ ರಜನಿಕಾಂತ್‌ ಅವರು ತಮಿಳುನಾಡಿನ ರಾಜಕಾರಣಕ್ಕೆ ಸೂಕ್ತವಲ್ಲ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com