ಪ್ರಕರಣ ಸಂಬಂಧ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ತಮ್ಮ ಕ್ರಮವನ್ನು ಲೀತುಲ್ ಗೊಗೊಯಿಯವರು ಸಮರ್ಥಿಸಿಕೊಂಡಿದ್ದರು. ನನ್ನ ಈ ಕ್ರಮ ಹಲವು ಅರೆ ಸೇನಾ ಪಡೆಗಳು, ಚುನಾವಣಾ ಸಿಬ್ಬಂದಿಗಳು ಹಾಗೂ ಜನರ ಪ್ರಾಣಗಳನ್ನು ಉಳಿಸಿತ್ತು. ಒಂದು ವೇಳೆ ನಾನು ಈ ರೀತಿಯ ನಿರ್ಧಾರ ಕೈಗೊಳ್ಳದೇ ಇದ್ದಿದ್ದರೆ ಗುಂಡಿನ ದಾಳಿ ನಡೆಸುವಂತೆ ಆದೇಶ ನೀಡಬೇಕಿತ್ತು. ಇದರಿಂದ ಸಾಕಷ್ಟು ಸಮಸ್ಯೆಗಳು, ಪ್ರಾಣಹಾನಿಗಳು ಎದುರಾಗುತ್ತಿತ್ತು ಎಂದು ಹೇಳಿದ್ದರು.