ಕಾರ್ಯಕ್ರಮದಲ್ಲಿ ಆಹಾರ ಸಂಸ್ಕರಣೆ ಖಾತೆ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಮತ್ತು ಆಹಾರ ಸಂಸ್ಕರಣೆ ಖಾತೆ ರಾಜ್ಯ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ ಸೇರಿದಂತೆ ಹಲವರು ಕಿಚಿಡಿ ತಯಾರಿ ಸಂದರ್ಭದಲ್ಲಿ ಹಾಜರಿದ್ದರು. ಭಾರತದ ಸಾಂಪ್ರದಾಯಿಕ ತಿನಿಸಾದ ಕಿಚಿಡಿಯ ಪ್ರಯೋಜನವನ್ನು ವಿವರಿಸಿದ ಸಚಿವೆ ಹರ್ಸಿಮ್ರತ್ ಕೌರ್, ಕಿಚಿಡಿಯಲ್ಲಿ ಬಹುತೇಕ ಪೌಷ್ಟಿಕಾಂಶಗಳಿರುವುದರಿಂದ ಇದೊಂದು ಸಂಪೂರ್ಣ ಆಹಾರವಾಗಿದೆ. ವಿವಿಧತೆಯಲ್ಲಿ ಏಕತೆ ಎಂಬ ಭಾರತದ ತತ್ವವನ್ನು ಕೂಡ ಕಿಚಿಡಿ ಸಾರುತ್ತದೆ ಎಂದರು.
ರಾತ್ರಿಯಿಡೀ ತಯಾರಾದ ಕಿಚಿಡಿಯ ಉಸ್ತುವಾರಿ ಖ್ಯಾತ ಬಾಣಸಿಗ ಸಂಜೀವ್ ಕಪೂರ್ ವಹಿಸಿದ್ದರು.
ದೆಹಲಿಯಲ್ಲಿ ನಡೆದ ಆಹಾರ ಮೇಳದಲ್ಲಿ ಈ ಕಿಚಿಡಿಯನ್ನು ತಯಾರಿಸಲಾಯಿತು. ಈ ಮೇಳದಲ್ಲಿ ಭಾರತದ 20ಕ್ಕೂ ಹೆಚ್ಚು ರಾಜ್ಯಗಳ ಸಾಂಪ್ರದಾಯಿಕ ಆಹಾರಗಳನ್ನು ಪರಿಚಯಿಸಲಾಯಿತು.