ಶನಿವಾರ ತಡರಾತ್ರಿಯಲ್ಲಿ ಕಾಜಿರಂಗ ಅಭಯಾರಣ್ಯ ಪ್ರದೇಶದಲ್ಲಿದ್ದ ಒಂದು ಹೆಣ್ಣು ಘೇಂಡಾ ಮೃಗ ಮತ್ತು ಅದರ ಮರಿಯನ್ನು ಕೊಂದು ಹಾಕಲಾಗಿದೆ. ಭೇಟೆಗಾರರು ರೈನೋಗಳನ್ನು ಕೊಲ್ಲಲು ಅತ್ಯಾಧುನಿಕ ಎಕೆ ಸರಣಿಯ ಬಂದೂಕನ್ನು ಬಳಕೆ ಮಾಡಿದ್ದಾರೆ. ಕಾಜಿರಂಗ ಅರಣ್ಯಪ್ರದೇಶದ ಬುರ್ರಾಪಹಾರ್ ಪ್ರಾಂತ್ಯದ ಟುನಿಕಟಿ ಭೇಟೆ ನಿಷೇಧ ಪ್ರದೇಶದ ವ್ಯಾಪ್ತಿಯಲ್ಲಿ ರೈನೋಗಳ ಕಳೇಬರ ದೊರೆತಿದೆ. ಆದರೆ ಅವುಗಳ ಕೊಂಬುಗಳು ಮಾತ್ರ ಕಾಣೆಯಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.