ಇನ್ನು ಈ ಪ್ರಕರಣ ಸಂಬಂಧ ಮಾಧ್ಯಮಗಳಲ್ಲಿ ಭಾರಿ ಚರ್ಚೆಗಳಾಗುತ್ತಿದ್ದು, ನಿವೃತ್ತ ಸೇನಾಧಿಕಾರಿ ಮಹಿರುದ್ದೀನ್ ಅಹ್ಮದ್ ಅವರು ಹೇಳಿರುವಂತೆ ನಾನು ಹುಟ್ಟಿದ್ದು ಭಾರತದಲ್ಲೇ..ಬಾರ್ಪೇಟಾದಲ್ಲಿ 1964ರಲ್ಲಿ ನಾನು ಜನಿಸಿದೆ. ಇಷ್ಟಕ್ಕೂ ನಾನು ಬೇರೆ ದೇಶದವನಾಗಿದ್ದರೆ ಸೇನೆಯಲ್ಲಿ ನನಗೆ ಹೇಗೆ ಕೆಲಸ ಸಿಗುತ್ತಿತ್ತು ಎಂಬ ಕನಿಷ್ಠ ಆಲೋಚನೆ ಕೂಡ ಅಧಿಕಾರಿಗಳಿಗೆ ಇಲ್ಲವೇ..? ದಶಕಗಳ ಕಾಲ ದೇಶದ ಗಡಿಯಲ್ಲಿ ನಾನು ಸೇವೆ ಸಲ್ಲಿಸಿದ್ದು, 2004ರಲ್ಲಿ ನಾನು ಸೇನೆಯಿಂದ ನಿವೃತ್ತನಾಗಿದ್ದೇನೆ. ಇಂತಹ ಪ್ರಕರಣಗಳನ್ನು ನಮ್ಮಂತಹ ಸೈನಿಕರಿಗೆ ತುಂಬಾ ನೋವನ್ನುಂಟು ಮಾಡುತ್ತದೆ. ದೇಶಕ್ಕಾಗಿ ದುಡಿದ ನಮ್ಮಂತಹವರಿಗೆ ಇಂತಹ ಅವಮಾನ ಸಲ್ಲದು.. ಎಂದು ಹೇಳಿದ್ದಾರೆ.