" ತಮ್ಮ ನೂತನ ಆ್ಯಪ್ ರಾಜ್ಯದ ಜನತೆಯ ನೆರವಿಗೆ ನಿಲ್ಲಲ್ಲಿದ್ದು, ಭ್ರಷ್ಟಾಚಾರ ಬಹಿರಂಗಪಡಿಸಲು ಮತ್ತು ಜನರ ಸಮಸ್ಯೆ ಆಲಿಸಲೆಂದೇ ಈ ಆ್ಯಪ್ ರೂಪುಗೊಂಡಿದೆ. ನಾನು ಜನ ಸೇವೆಗಾಗಿಯೇ ರಾಜಕೀಯಕ್ಕೆ ಬರುತ್ತಿದ್ದೇನೆ. ಆದರೆ ತಡವಾಗಿ ರಾಜಕೀಯದ ಬಗ್ಗೆ ಯೋಚಿಸಿದ್ದಕ್ಕೆ ಕ್ಷಮೆ ಇರಲಿ. ಇನ್ನು ನಾನು ಬಹುದೊಡ್ಡ ಕನಸಿನೊಂದಿಗೆ ರಾಜಕೀಯ ಪ್ರವೇಶ ಮಾಡುತ್ತಿದ್ದೇನೆ. ತಮಿಳುನಾಡು ಜನತೆ ಬದಲಾವಣೆ ಬಯಸುತ್ತಿದ್ದು, ಇದೇ ಕಾರಣಕ್ಕಾಗಿ ಅವರು ನನ್ನನ್ನು ವಿಶೇಷವಾಗಿ ನೋಡುತ್ತಿದ್ದಾರೆ. ಕನಸುಗಳೇ ಹೊಸ ಅನ್ವೇಷಣೆಗೆ ದಾರಿ ಮಾಡುತ್ತವೆ. ಹೊಸ ಅನ್ವೇಷಣೆಗಳು ಮುಂದೆ ಬದುಕಾಗುತ್ತದೆ. ತುಂಬಾ ಜನ ಇಂದು ನಾನು ಹೊಸ ಪಕ್ಷ ಘೋಷಣೆ ಮಾಡುತ್ತೇನೆ ಎಂದು ಭಾವಿಸಿದ್ದರು. ಆದರೆ ನಾನು ನೆಪಮಾತ್ರಕ್ಕೆ ಪಕ್ಷ ಘೋಷಣೆ ಮಾಡಲು ಸಿದ್ಧನಿಲ್ಲ. ಪಕ್ಷ ಸ್ಥಾಪನೆ ಕುರಿತಂತೆ ಸಾಕಷ್ಟು ವಿಚಾರಗಳನ್ನು ನಾನು ಅರಿಯಬೇಕಿದೆ. ಅಂತೆಯೇ ಈ ಬಗ್ಗೆ ತಳಮಟ್ಟದಲ್ಲಿ ಕೆಲಸ ಕಾರ್ಯಗಳು ಆಗಬೇಕಿದೆ. ಹೀಗಾಗಿ ಇದು ವಿಳಂಬವಾಗುತ್ತದೆ ಎಂದು ಕಮಲ್ ಹೇಳಿದರು.