ಲೂಧಿಯಾನ: ಮಗುವಿನ ಮೇಲೆ ಹರಿದ ಕಾರು: ಚಾಲಕನನ್ನು ಹತ್ಯೆಗೈದ ಉದ್ರಿಕ್ತ ಜನ

ಮಗುವಿನ ಮೇಲೆ ಕಾರು ಹರಿಸಿದ ವ್ಯಕ್ತಿಯೊಬ್ಬನನ್ನು ಉದ್ರಿಕ್ತ ಜನರು ಹೊಡೆದು ಸಾಯಿಸಿರುವ ಘಟನೆ ಲುಧಿಯಾನಾದಲ್ಲಿ ಶುಕ್ರವಾರ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲುಧಿಯಾನ: ಮಗುವಿನ ಮೇಲೆ ಕಾರು ಹರಿಸಿದ ವ್ಯಕ್ತಿಯೊಬ್ಬನನ್ನು ಉದ್ರಿಕ್ತ ಜನರು ಹೊಡೆದು ಸಾಯಿಸಿರುವ ಘಟನೆ ಲುಧಿಯಾನಾದಲ್ಲಿ ಶುಕ್ರವಾರ ನಡೆದಿದೆ. 
ಸಂಜಿತ್ (45) ಮೃತ ವ್ಯಕ್ತಿಯಾಗಿದ್ದಾನೆ. ಪುತ್ರಿ ಮದುವೆಯ ಆಮಂತ್ರಣ ಪತ್ರಿಕೆಯನ್ನು ಸಂಬಂಧಿಕರಿಗೆ ನೀಡುವ ಸಲುವಾಗಿ ಸಂಜಿತ್ ಅವರು ಹೋಗುತ್ತಿದ್ದರು. ಈ ವೇಳೆ ಕಾರು ರಸ್ತೆಯಲ್ಲಿದ್ದ ಮಗುವಿನ ಮೇಲೆ ಹರಿದಿದೆ. 
ಇದರಿಂದ ತೀವ್ರವಾಗಿ ಕೆಂಡಾಮಂಡಲಗೊಂಡ ಸ್ಥಳೀಯರು ಕಾರನ್ನು ಸುತ್ತುವರೆದು ಸಂಜಿತ್'ರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಸಂಜಿತ್ ಪ್ರಜ್ಞೆಯನ್ನು ಕಳೆದುಕೊಂಡಿದ್ದಾರೆ. 
ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ವೈದ್ಯರು ವ್ಯಕ್ತಿ ಸಾವನ್ನಪ್ಪಿದ್ದಾರೆಂದಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com