ಅರುಣ್ ಜೇಟ್ಲಿ
ಅರುಣ್ ಜೇಟ್ಲಿ

ಸರ್ಕಾರವು ಪ್ರತಿವರ್ಷ 10,000 ಕಿ.ಮೀ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡುತ್ತದೆ: ಅರುಣ್ ಜೇಟ್ಲಿ

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಿದ್ದು ವಾರ್ಷಿಕವಾಗಿ ಶೇ. ಏಳರಿಂದ ಎಂಟರಷ್ಟು ಪ್ರಗತಿ ದಾಖಲಿಸುತ್ತಿದೆ ಎಂದಿದ್ದಾರೆ.
ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಿದ್ದು ವಾರ್ಷಿಕವಾಗಿ ಶೇ. ಏಳರಿಂದ ಎಂಟರಷ್ಟು ಪ್ರಗತಿ ದಾಖಲಿಸುತ್ತಿದೆ ಎಂದಿದ್ದಾರೆ.
"ಮುಂದಿನ ಎರಡು ದಶಕಗಳಲ್ಲಿ ಭಾರತವು ತನ್ನ ಮೂಲಭೂತ ಸೌಕರ್ಯಗಳನ್ನು ನವೀಕರಿಸುವ ಅಗತ್ಯವಿದೆ, ಇದಕ್ಕಾಗಿ ಸಾಕಷ್ಟು ಹೂಡಿಕೆ ಮತ್ತು ಖರ್ಚು ಮಾಡುವುದು ಅಗತ್ಯವಾಗಿದೆ. ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತಿದೆ"  'ಜಾಗತಿಕ ಮಟ್ಟದ ಮೂಲಸೌಕರ್ಯಕ್ಕಾಗಿ ಭಾರತದ ರಸ್ತೆಮಾರ್ಗ' ಕುರಿತು ಡಿಫೆನ್ಸ್ ಎಸ್ಟೇಟ್ ದಿನಾಚರಣೆ ಭಾಷಣದಲ್ಲಿ ಜೇಟ್ಲಿ ಮಾತನಾಡಿದರು.
ಭಾರತವು ಹೆಚ್ಚು ಮಹತ್ವಾಕಾಂಕ್ಷೆಯ ರಾಷ್ಟ್ರವಾಗಿ ಬದಲಾಗುತ್ತಿದೆ,  ಇದೊಂದು ಸಕಾರಾತ್ಮಕ ಬದಲಾವಣೆಯಾಗಿ ಕಾಣುತ್ತಿದೆ, ಸರ್ಕಾರವು 2007 ರಿಂದ 2017 ರವರೆಗೆ ಮೂಲಭೂತ ಸೌಕರ್ಯಗಳ ಮೇಲೆ ರೂ. 60,000 ಲಕ್ಷ ಕೋಟಿ ರೂ.  ಹೂಡಿಕೆ ಮಾಡಿದೆ. ನಾವು ರಾಷ್ಟ್ರೀಯ ಮೂಲಸೌಕರ್ಯ ಹೂಡಿಕೆ ನಿಧಿಯನ್ನು ರಚಿಸಿದ್ದೇವೆ, ಇದರಲ್ಲಿ ಸರ್ಕಾರ. ಹೂಡಿಕೆ ಮಾಡಿದೆ ಮತ್ತು ವಿದೇಶಿ ಹೂಡಿಕೆದಾರರಿಂದ ಬಂಡವಾಳ ಹೂಡಿಕೆ ಮಾಡಿಸಲಾಗುತ್ತಿದೆ, ಜೇಟ್ಲಿ ವಿವರಿಸಿದರು. 
ಮೂಲಭೂತ ಸೌಕರ್ಯ ಕ್ಷೇತ್ರಕ್ಕೆ ಮುಂದಿನ ಐದು ವರ್ಷಗಳಲ್ಲಿ ರೂ 50,000 ಕೋಟಿ ಮೌಲ್ಯದ ಬಂಡವಾಳ ಹರಿದುಬರಲಿರುವ ಸೂಚನೆಯನ್ನು ಜೇಟ್ಲಿ ನೀಡಿದ್ದಾರೆ. ಜತೆಗೆ, ಪ್ರತಿ ವರ್ಷ ಹೆದ್ದಾರಿಗಳ ನಿರ್ಮಾಣಕ್ಕಾಗಿ ಮಾಡಿದ್ದ ವೆಚ್ಚದ ಬಗ್ಗೆಯೂ ಜೇಟ್ಲಿ ಮಾತನಾಡಿದರು.

Related Stories

No stories found.

Advertisement

X
Kannada Prabha
www.kannadaprabha.com