ಕಾನ್ಪುರ್: ದುಷ್ಕರ್ಮಿಗಳಿಂದ ಗುಂಡಿನ ದಾಳಿ, ಯುವ ಪತ್ರಕರ್ತ ಸಾವು

ಕಾನ್ಪುರ್ ನ ಬಿಲ್ಲೌರ್ ನಲ್ಲಿ ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಓರ್ವ ಪತ್ರಕರ್ತನನ್ನು ಗುಂಡಿಕ್ಕಿ ಕೊಂದಿದ್ದಾರೆ.
ನವೀನ್ ಶ್ರೀವಾಸ್ತವ
ನವೀನ್ ಶ್ರೀವಾಸ್ತವ
ಕಾನ್ಪುರ್: ಕಾನ್ಪುರ್ ನ ಬಿಲ್ಲೌರ್ ನಲ್ಲಿ ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಓರ್ವ  ಪತ್ರಕರ್ತನನ್ನು ಗುಂಡಿಕ್ಕಿ ಕೊಂದಿದ್ದಾರೆ. ಪತ್ರಕರ್ತರಾದ ನವೀನ್ ಶ್ರೀವಾಸ್ತವ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಕೊನೆಯುಸಿ ರೆಳೆದಿದ್ದಾರೆ
ನವೀನ್ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದು ಅಪರಾಧಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. 
ಹತ್ಯೆಯಾದ ನವೀನ್ ಕಾನ್ಪುರ್ ನ ಹಿಂದೂಸ್ಥಾನ್ ವೃತ್ತಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com