ಮುಂಬೈ ವಕೀಲೆ ಪಲ್ಲವಿ ಹತ್ಯೆ ಪ್ರಕರಣ: ಪರೋಲ್ ಮೇಲೆ ಹೊರ ಬಂದಿದ್ದ ಅಪರಾಧಿ ಬಂಧನ

ಪರೋಲ್ ಮೇಲೆ ಜೈಲಿನಿಂದ ಹೊರಬಂದು ತಲೆ ಮರೆಸಿಕೊಂಡಿದ್ದ ಮುಂಬೈ ವಕೀಲೆ ಪಲ್ಲವಿ ಪುರ್ಕಯಸ್ಥಾ ಕೊಲೆ ಪ್ರಕರಣದ ಅಪರಾಧಿ ಸಜ್ಜದ್ ಮುಘಲ್ ಪಠಾಣ್ ನನ್ನು ಪೊಲೀಸರು ಬಂಧಿಸಿದ್ದಾರೆ...
ಪಲ್ಲವಿ ಪುರ್ಕಯಸ್ಥಾ
ಪಲ್ಲವಿ ಪುರ್ಕಯಸ್ಥಾ
ಮುಂಬೈ: ಪರೋಲ್ ಮೇಲೆ ಜೈಲಿನಿಂದ ಹೊರಬಂದು ತಲೆ ಮರೆಸಿಕೊಂಡಿದ್ದ  ಮುಂಬೈ ವಕೀಲೆ ಪಲ್ಲವಿ ಪುರ್ಕಯಸ್ಥಾ ಕೊಲೆ ಪ್ರಕರಣದ ಅಪರಾಧಿ ಸಜ್ಜದ್ ಮುಘಲ್ ಪಠಾಣ್ ನನ್ನು ಪೊಲೀಸರು ಬಂಧಿಸಿದ್ದಾರೆ. 
2012ರಲ್ಲಿ ದೆಹಲಿ ಮೂಲದ ಐಎಎಸ್ ಅಧಿಕಾರಿ ಪುತ್ರಿ ಪಲ್ಲವಿ ಎಂಬುವರನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದ ಅಪರಾಧಿ ಸಜ್ಜದ್ ಮೊಘಲ್ ಪೆರೋಲ್ ಮೇಲೆ ಕಳೆದ ವರ್ಷದ ಆರಂಭದಲ್ಲಿ ಹೊರ ಬಂದಿದ್ದ ಆತ ತಲೆ ಮರೆಸಿಕೊಂಡಿದ್ದ.
2014ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಸಜ್ಜದ್ ಅಸ್ವಸ್ಥ ತಾಯಿಯನ್ನು ನೋಡಿಕೊಂಡು ಬರುವುದಾಗಿ ಹೇಳಿ ಪೆರೋಲ್ ಮೇಲೆ ಹೊರ ಬಂದು ತಲೆ ಮರೆಸಿಕೊಂದ್ದಾನೆ. 
ಇದರಿಂದಾಗಿ ಅತ್ಯಾಚಾರದಂತಹ ಹೀನ ಕೃತ್ಯಗಳನ್ನು ಮಾಡಿದಂತ ಅಪರಾಧಿಗಳಿಗೆ ಪೆರೋಲ್ ನೀಡದಿರಲು ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com