ಲಕ್ಷ್ಮಯ್ಯ ಮತ್ತು ನರಸಮ್ಮ ದಿನಗೂಲಿ ನೌಕರರಾಗಿದ್ದು ತಮ್ಮ 5 ವರ್ಷದ ಮಗುವಿನೊಂದಿಗೆ ಮಾದಾಪುರದ ಪಾರ್ವತ್ ನಗರದಲ್ಲಿ ವಾಸವಾಗಿದ್ದರು. ಮೊನ್ನೆ ಸೋಮವಾರ ರಾತ್ರಿ ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ನಿರ್ಮಾಣ ಹಂತದಲ್ಲಿದ್ದ ಮನೆಯ ಕೆಳಗೆ ದಂಪತಿ ಆಶ್ರಯ ಪಡೆದಿದ್ದರು. ಮದ್ಯ ಸೇವಿಸಿದ ಲಕ್ಷ್ಮಯ್ಯ ಪತ್ನಿ ಮತ್ತು ಮಗುವಿನ ಮೇಲೆ ಕ್ರೂರವಾಗಿ ನಡೆದುಕೊಳ್ಳಲು ಆರಂಭಿಸಿದ. ನರಸಮ್ಮ ಮಗಳನ್ನು ಎತ್ತಿಕೊಂಡು ಹೊರ ನಡೆಯಲು ಯತ್ನಿಸಿದಾಗ ಆತ ಮತ್ತಷ್ಟು ಕುಪಿತನಾಗಿ ಮಗಳನ್ನು ಹಿಡಿದುಕೊಂಡನು. ಮಗುವಿನ ಬಲಗಣ್ಣಿಗೆ ಬ್ಲೇಡ್ ನಿಂದ ಗಾಯ ಮಾಡಿ ಅಲ್ಲಿಂದ ಓಡಿ ಹೋದನು. ನರಸಮ್ಮ ಅಸಹಾಯಕಳಾಗಿ ತನ್ನ ಮನೆಗೆ ವಾಪಸಾದಳು.