ಕಾರು ಡಿಕ್ಕಿ ಹೊಡೆದು ಯುವಕನ ಸಾವು: ಪಾರಾಲಂಪಿಕ್ ವಿಜೇತ ಮರಿಯಪ್ಪನ್ ವಿರುದ್ಧ ದೂರು, 24ಕ್ಕೆ ಕೋರ್ಟ್ ನಲ್ಲಿ ವಿಚಾರಣೆ

ಯುವಕನೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ಯಾರಾಲಂಪಿಕ್ ಚಿನ್ನದ ಪದಕ ವಿಜೇತ ...
ಟಿ. ಮರಿಯಪ್ಪನ್
ಟಿ. ಮರಿಯಪ್ಪನ್
Updated on
ಚೆನ್ನೈ: ಯುವಕನೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ಯಾರಾಲಂಪಿಕ್ ಚಿನ್ನದ ಪದಕ ವಿಜೇತ ಟಿ. ಮರಿಯಪ್ಪನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.
ಸೇಲಂ ಜಿಲ್ಲೆಯ ಕಡಯಂಪಟ್ಟಿ ತಾಲ್ಲೂಕಿನ ಎಂ.ಮುನಿಯಮ್ಮಲ್ ಎಂಬುವವರು ನ್ಯಾಯಮೂರ್ತಿ ಎಂ.ಎಸ್.ರಮೇಶ್ ಅವರಿಗೆ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ನಿನ್ನೆ ಕೈಗೆತ್ತಿಕೊಳ್ಳಲಾಗಿತ್ತು. ಪ್ಯಾರಾಲಂಪಿಕ್ ಆಟಗಾರ ಮರಿಯಪ್ಪನ್ ಅವರನ್ನು ಪ್ರತಿವಾದಿಯನ್ನಾಗಿ ಮೊಕದ್ದಮೆ ಹೂಡಿ ಅಕ್ಟೋಬರ್ 24ಕ್ಕೆ ವಿಚಾರಣೆಯನ್ನು ಮುಂದೂಡಿತು.
ತಮ್ಮ ಪುತ್ರನ ದ್ವಿಚಕ್ರ ವಾಹನಕ್ಕೆ ತಮ್ಮ ಕಾರನ್ನು ಡಿಕ್ಕಿ ಹೊಡೆದು ಸಾವಿಗೆ ಕಾರಣರಾಗಿದ್ದಾರೆ ಎಂದು ಮುನಿಯಮ್ಮಲ್ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com