ಒಡಿಶಾ: ಊದುಕುಲುಮೆ ಸ್ಫೋಟ, 13 ಮಂದಿಗೆ ಗಂಭೀರ ಗಾಯ

ಒಡಿಶಾದ ಕೆಯೊಂಜ್ಹಾರ ಜಿಲ್ಲೆಯಲ್ಲಿನ ಕೆಜೆಎಸ್ ಅಹ್ಲುವಾಲಿಯಾ ಸ್ಪಾಂಜ್ ಕಬ್ಬಿಣ ಸ್ಥಾವರದಲ್ಲಿ ಊದುಕುಲುಮೆ ಸ್ಫೋಟಗೊಂಡಿದ್ದರ ಪರಿಣಾಮ 13 ಮಂದಿಗೆ ಗಂಭೀರ...
ಕಬ್ಬಿಣ ಸ್ಥಾವರ
ಕಬ್ಬಿಣ ಸ್ಥಾವರ
ಭುವನೇಶ್ವರ್: ಒಡಿಶಾದ ಕೆಯೊಂಜ್ಹಾರ ಜಿಲ್ಲೆಯಲ್ಲಿನ ಕೆಜೆಎಸ್ ಅಹ್ಲುವಾಲಿಯಾ ಸ್ಪಾಂಜ್ ಕಬ್ಬಿಣ ಸ್ಥಾವರದಲ್ಲಿ ಊದುಕುಲುಮೆ ಸ್ಫೋಟಗೊಂಡಿದ್ದರ ಪರಿಣಾಮ 13 ಮಂದಿಗೆ ಗಂಭೀರ ಗಾಯಗಳಾಗಿವೆ. 
ಸ್ಫೋಟದ ಬಳಿಕ ಕೂಡಲೇ ಗಾಯಾಳುಗಳನ್ನು ಟಿಸ್ಕೋ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಇವರ ಪೈಕಿ ನಾಲ್ವರಿಗೆ ಸುಟ್ಟ ಗಾಯಗಳಾಗಿದ್ದು ಅವರನ್ನು ಬಳಿಕ ಎಸ್ಸಿಬಿ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ಅವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. 
ಬೆಳಗ್ಗೆ 8.30ರ ಸುಮಾರಿಗೆ ಈ ಸ್ಫೋಟ ಸಂಭವಸಿದ್ದು ಈ ವೇಳೆ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದರು. ಸ್ಫೋಟದ ನಂತರ ಕಾರ್ಮಿಕರು ಕೂಡಲೇ ಹೊರಗೆ ಬಂದಿದ್ದರಿಂದ ಪ್ರಾಣ ಹಾನಿ ಸಂಭವಿಸಿಲ್ಲ. 
ಇನ್ನು ಕಾರ್ಖಾನೆಯಲ್ಲಿ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com