ಹೈದರಾಬಾದ್: ತೆಲಂಗಾಣದ ನಿರ್ಮಲ್ ಜಿಲ್ಲೆಯ ಕಾಶಿಗುಡ ಗ್ರಾಮದ ಕೆಲ ಕುಟುಂಬಗಳು ಮೋಹಿನಿಗೆ ಕಾಟಕ್ಕೆ ಹೆದರಿ ಗ್ರಾಮ ತೊರೆಯುತ್ತಿರುವ ಘಟನೆ ವರದಿಯಾಗಿದೆ.
ಕತ್ತಲಾದ ಮೇಲೆ ಈ ಗ್ರಾಮದಲ್ಲಿ ಹೆಣ್ಣು ಭೂತ ಪುರುಷರ ಮೇಲೆ ಮಾತ್ರ ದಾಳಿ ಮಾಡುತ್ತಿದೆಯಂತೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮಹಿಳೆಯರು ಮಾತ್ರ ಬದುಕುವಂತಾಗಿದೆ.
ಈ ಗ್ರಾಮದಲ್ಲಿ ಸುಮಾರು 60 ಕುಟುಂಬಗಳು ಮಾತ್ರ ವಾಸವಿದ್ದು ಇಲ್ಲಿ ವಾಸಿಸಲು ಪುರುಷರೀಗ ಭಯ ಪಡುತ್ತಿದ್ದಾರೆ. ಅಲ್ಲಿ ಅಸ್ವಾಭಾವಿಕ ಘಟನೆ ನಡೆಯುತ್ತಿರುವುದರಿಂದ ಅಲ್ಲಿಯ ಕುಟುಂಬಗಳು ಗ್ರಾಮವನ್ನೇ ಬಿಟ್ಟು ಹೋಗುತ್ತಿವೆ.
ಇನ್ನು ಗ್ರಾಮದಲ್ಲಿ ಉಳಿದುಕೊಂಡವರು ಸೂರ್ಯ ಮುಳುಗುವ ಮುಂಚೆ ಮನೆ ಸೇರಿದರೆ ಸೂರ್ಯ ಉದಯಿಸಿದ ನಂತರವಷ್ಟೇ ಮನೆಯಿಂದ ಹೊರಗೆ ಬರುತ್ತಿದ್ದಾರೆ.