ಚಂಡೀಗಢ: ಗುರುದಾಸ್ಪುರ ಲೋಕಸಭೆ ಉಪ ಚುನಾವಣೆ ಫಲಿತಾಂಶಕ್ಕೆ ಒಂದು ದಿನ ಮೊದಲು ಆಮ್ ಆದ್ಮಿ ಪಕ್ಷ ಗುರ್ ದಾಸ್ ಪುರ್ ಮತ್ತು ಪಠಾಣ್ ಕೋಟ್ ಜಿಲ್ಲೆಗಳಲ್ಲಿ ತನ್ನ ಘಟಕಗಳನ್ನು ವಿಸರ್ಜಿಸಿದೆ.
ಆರ್ ರಾಜ್ಯಾಧ್ಯಕ್ಷ ಮತ್ತು ಸಂಗ್ರೂರ್ ಸಂಸದ ಭಗವಂತ್ ಮನ್ನ್, ಸಹ ರಾಜ್ಯಾಧ್ಯಕ್ಷ ಮತ್ತು ಸುನಮ್ ಶಾಸಕ ಅಮನ್ ಅರೊರ ಅವರಿಂದ ಪ್ರತಿಕ್ರಿಯೆ ಬಂದ ನಂತರ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಂಜಾಬ್ ಆಪ್ ರಾಜ್ಯ ಕಾರ್ಯದರ್ಶಿ ಗುಲ್ಶನ್ ತಿಳಿಸಿದ್ದಾರೆ.
ಪಕ್ಷದ ಪದಾಧಿಕಾರಿಗಳು ಮತ್ತು ಶಾಸಕರೊಂದಿಗೆ ಚರ್ಚೆ ನಡೆಸಿ ಎರಡೂ ಜಿಲ್ಲೆಗಳ ಹೊಸ ರಚನಾ ಘಟಕಗಳನ್ನು ಘೋಷಿಸಲಾಗುವುದು ಎಂದು ಹೇಳಿದರು.