"ಆಧಾರ್ ನಂಬರ್ ಪಡೆಯುವವರೆಗೆ ಪಡಿತರ ಸೇರಿದಂತೆ ಯೋಜನೆಗಳ ಲಾಭ ಪಡೆಯಲು ಇತರ ಗುರುತು ಪತ್ರ ಬಳಸಿಕೊಳ್ಳಲು ಅವಕಾಶವಿದೆ. ಬಾಲಕಿಯ ಸಾವಿಗೆ ಸಂಬಂಧಿಸಿದಂತೆ ಜಾರ್ಖಂಡ್ ಸರಕಾರ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಮುಂದೆ ಇಂತಹ ತಪ್ಪುಗಳು ನಡೆಯದಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದು ಪಾಂಡೆ ಹೇಳಿದರು. ಇದೇ ವೇಳೆ ಜಾರ್ಖಂಡ್ ನ ಸಂತ್ರಸ್ಥ ಬಾಲಕಿ ಕುಟುಂಬ 2013ರಲ್ಲೇ ಆಧಾರ್ ನಂಬರ್ ಪಡೆದಿದೆ ಎಂದು ಹೇಳಿರುವ ಪಾಂಡೆ ಅವರು, ಆಧಾರ್ ಇದ್ದರೂ ಇದರ ಸೌಲಭ್ಯ ನೀಡಲು ನಿರಾಕರಿಸುವುದು ಅಪರಾಧವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.