ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ಪಡೆ (ಎಸ್ ಟಿಎಫ್) ಅಧಿಕಾರಿಗಳು ಗೋರಕ್ ಪುರದಲ್ಲಿ ಇಂದು ಬೆಳಗ್ಗೆ ಕಫೀಲ್ ಖಾನ್ ನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆಯಷ್ಟೇ ಎಸ್ ಟಿಎಫ್ ಅಧಿಕಾರಿಗಳು ದುರಂತ ಸಂಬಂಧ ಆಸ್ಪತ್ರೆಯ 7 ಮಂದಿ ವೈದ್ಯರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಇದಲ್ಲದೆ ವೈದ್ಯರಾದ ಡಾ.ಸತೀಶ್, ಡಾ.ಗಜಾನನ್ ಜೈಸ್ವಾಲ್, ಲೆಕ್ಕಾಧಿಕಾರಿ ಸುಧೀರ್ ಪಾಂಡೆ, ಸಹಾಯಕ ಗುಮಾಸ್ತ ಸಂಜಯ್ ಕುಮಾರ್ ತ್ರಿಪಾಠಿ ,ಆಕ್ಸಿಜನ್ ಸರಬರಾಜು ಮಾಡುತ್ತಿದ್ದ ಉದಯ್ ಪ್ರತಾಪ್ ಸಿಂಗ್ ಮತ್ತು ಮನೀಷ್ ಭಂಡಾರಿ ಅವರ ವಿರುದ್ದ ವಾರಂಟ್ ಹೊರಡಿಸಲಾಗಿತ್ತು. ಇದರ ಬೆನ್ನಲ್ಲೇ ವೈದ್ಯ ಕಫೀಲ್ ಖಾನ್ ನನ್ನು ಅಧಿಕಾರಿಗಳು ಬಂಧಿಸಿದ್ದಾರೆ.