ಕಳೆದ ಏಳು-ಎಂಟು ವರ್ಷಗಳಿಂದ ಅಂಧರ ಸಂಸ್ಥೆಗೆ ಧನ ಸಹಾಯ ಮಾಡುತ್ತಿದ್ದ ಮರ್ರೇ, ಸಂಸ್ಥೆಯ ಕಚೇರಿಗೆ ಹಾಗಾಗ ಭೇಟಿ ನೀಡುತ್ತಿದ್ದ. ಶನಿವಾರ ಸಂಜೆ ಕನಿಷ್ಠ ಮೂವರು ಮಕ್ಕಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವಿಚಾರವನ್ನು ಮಕ್ಕಳು ತಮ್ಮ ಶಿಕ್ಷಕರಿಗೆ ತಿಳಿಸಿದ್ದು, ಶಿಕ್ಷಕರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿರುವುದಾಗಿ ದೆಹಲಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.