ಗುರ್ಮಿತ್ ಬಂಧನದ ಬಳಿಕ ಆಶ್ರಮದ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ 9ಎಂಎಂ ಪಿಸ್ತೂಲ್, ಡಬಲ್ ಬ್ಯಾರೆಲ್ ರೈಫಲ್ಸ್ ಗಳು, ಕಾರ್ಬೈನ್ ಗಳು ಹಾಗೂ ಸ್ಫೋಟಕ ವಸ್ತುಗಳು ಪಡೆದುಕೊಳ್ಳಲಾಗಿತ್ತು. ಡೇರಾ ಆಶ್ರಮದಲ್ಲಿಯೇ 3-4 ದಿನಗಲ ಕಾಲ ಉಳಿದುಕೊಳ್ಳಲಾಗಿತ್ತು. ಈ ವೇಳೆ ಕಾನೂನು ಕ್ರಮ ಎದುರುವುದಕ್ಕೂ ಮುನ್ನ ಎಲ್ಲಾ ಶಸ್ತ್ರಾಸ್ತ್ರಗಳನ್ನು ವಶಕ್ಕೆ ನೀಡುವಂತೆ ಗುರ್ಮಿತ್ ಬೆಂಬಲಿಗರಲ್ಲಿ ಮನವಿ ಮಾಡಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.