ಕೆಲ ದಿನಗಳ ಹಿಂದಷ್ಟೇ ಗೌರಿ ಲಂಕೇಶ್ ಹತ್ಯೆ ಕುರಿತಂತೆ ಬಿಜೆಪಿ ಹಾಗೂ ಆರ್'ಎಸ್ಎಸ್ ವಿರುದ್ದ ಕೇಳಿ ಬರುತ್ತಿದ್ದ ಆರೋಪಗಳ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದ ರವಿಶಂಕರ್ ಪ್ರಸಾದ್ ಅವರು, ನಕ್ಸಲರಿಗೆ ಗೌರಿ ಲಂಕೇಶ್ ಅವರ ಮೇಲೆ ಕೋಪವಿತ್ತು. ಅನಾವಶ್ಯವಕಾಗಿ ಆರ್'ಎಸ್ಎಸ್ ಹಾಗೂ ಬಿಜೆಪಿ ವಿರುದ್ಧ ಮಾತನಾಡಬಾರದು. ಗೌರಿ ಲಂಕೇಶ್ ಅವರ ಜೀವಕ್ಕೆ ಬೆದರಿಕೆಯಿದ್ದರೂ ಕರ್ನಾಟಕ ಸರ್ಕಾರವೇಕೆ ಅವರಿಗೆ ಸೂಕ್ತ ಭದ್ರತೆಯನ್ನು ಕೊಟ್ಟಿರಲಿಲ್ಲ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಪತ್ರಕರ್ತೆಯ ಜೀವಕ್ಕೆ ಬೆದರಿಕೆಯಿದ್ದರೂ ಅವರಿಗೆ ಭದ್ರತೆ ನೀಡುವಲ್ಲಿ ಅಲ್ಲಿನ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಪ್ರಕರಣವನ್ನು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗೌರಿಯವರಿಕೆ ಬೆದರಿಕೆ ಇದ್ದ ಕುರಿತು ರಾಜ್ಯ ಸರ್ಕಾರಕ್ಕೂ ಮಾಹಿತಿ ಇರಲಿಲ್ಲ. ಬದೆರಿಗೆ ಬಗ್ಗೆ ಗೊತ್ತಿದ್ದರೂ ರಾಜ್ಯ ಸರ್ಕಾರ ಏನು ಮಾಡುತ್ತಿತ್ತು. ಪ್ರಸಾದ್ ಅವರು ಪ್ರಶ್ನಿಸಿರುವುದು ಬೇಜವಾಬ್ದಾರಿಯ ಹೇಳಿಕೆ, ಗೌರಿಯವರಿಗೆ ಬೆದರಿಕೆ ಇದ್ದ ಬಗ್ಗೆ ಸರ್ಕಾರಕದ ಗಮನಕ್ಕೆ ತಂದಿದ್ದರೆ ಭದ್ರತೆಯ ನೀಡುತ್ತಿದ್ದೆವು. ಹತ್ಯೆಯ ಬಗ್ಗೆ ನಾನು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದರು.