ಅಂತೆಯೇ ಸಿಎಂ ಪಳನಿಸ್ವಾಮಿ ಬದಲಾವಣೆಗೆ ಆಗ್ರಹಿಸಿರುವ ದಿನಕರನ್, ಒಂದು ವೇಳೆ ಸಿಎಂ ಬದಲಾಗದಿದ್ದರೆ ಇಡೀ ಸರ್ಕಾರವನ್ನೇ ಉರುಳಿಸಲೂ ಕೂಡ ತಾವು ಯೋಚಿಸುವುದಿಲ್ಲ. ತಮ್ಮ ಬೆಂಬಲಿಗ ಶಾಸಕರೂ ಕೂಡ ಸಿಎ ಪಳನಿಸ್ವಾಮಿ ವಿರುದ್ಧ ಅವಿಶ್ವಾಸ ಹೊಂದಿದ್ದು, ಅವರ ಬದಲಾವಣೆಗೆ ಆಗ್ರಹಿಸಿದ್ದಾರೆ. ಅಂತೆಯೇ "ಅನಧಿಕೃತ" ಎಐಎಡಿಎಂಕೆ ಪಕ್ಷದ ಸಾಮಾನ್ಯಸಭೆಯಲ್ಲಿ ಪಾಲ್ಗೊಳ್ಳುವ ಶಾಸಕ ಹಾಗೂ ಮುಖಂಡರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ದಿನಕರನ್ ಎಚ್ಚರಿಕೆ ನೀಡಿದ್ದಾರೆ.