ಡಿಜಿಟಲ್ ಹರ್ಯಾಣ 2017 ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ರವಿಶಂಕರ್ ಪ್ರಸಾದ್, ಆಧಾರ್ ಡಿಜಿಟಲ್ ಗುರುತಾಗಿದೆ. ಡಿಜಿಟಲ್ ಗುರುತು ಭೌತಿಕ ಗುರುತನ್ನು ಸ್ಪಷ್ಟಪಡಿಸುತ್ತದೆ. ಕೇಂದ್ರ ಸರ್ಕಾರ ಚಾಲನಾ ಪರವಾನಗಿಯನ್ನೂ ಆಧಾರ್ ನೊಂದಿಗೆ ಜೋಡಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೂ ಮಾತನಾಡಿದ್ದೇನೆ ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.