ಈ ಆದೇಶವನ್ನು ಪ್ರಶ್ನಿಸಿ ಎಐಎಡಿಎಂಕೆಯ 8 ಶಾಸಕರಾದ ಪಿ ವೆಟ್ರಿವೇಲ್, ಎನ್ ಜಿ ಪಾರ್ಥಿಬನ್, ಪಿ ಪಳನಿಯಪ್ಪನ್, ಜಯಂತಿ ಪದ್ಮನಾಭನ್, ಸೇಂತಿಲ್ ಬಾಲಾಜಿ, ಆರ್ ಮುರುಗನ್, ಆರ್ ಬಾಲಸುಬ್ರಹ್ಮಣಿ ಮತ್ತು ಎಸ್ ಮುತ್ತೈಯ ಎಂಬುವರು ಮದ್ರಾಸ್ ಹೈಕೋರ್ಟ್ ನ ಮೊರೆ ಹೋಗಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ದುರೈಸ್ವಾಮಿ ಅವರು ಅಕ್ಟೋಬರ್ 4ಕ್ಕೆ ವಿಚಾರಣೆಯನ್ನು ಮುಂದೂಡಿದೆ.