ಪಾಕಿಸ್ತಾನದ ರೇಂಜರ್ ಗಳ ಮನವಿಯ ಮೇರೆಗೆ ಗಡಿಯಲ್ಲಿ ಕಮಾಂಡರ್ ಮಟ್ಟದ ಧ್ವಜ ಸಭೆ ನಡೆದಿದ್ದು, ತನ್ನ ಯೋಧರ ಹತ್ಯೆ ನಡೆಸುತ್ತಿರುವುದನ್ನು ಭಾರತ ತೀವ್ರವಾಗಿ ಖಂಡಿಸಿದೆ. ಅಷ್ಟೇ ಅಲ್ಲದೇ ಪಾಕಿಸ್ತಾನದ ಉದ್ಧಟತನ, ಕದನ ವಿರಾಮ ಉಲ್ಲಂಘನೆ ಮುಂದುವರೆದರೆ ಭಾರಿ ಮಟ್ಟದ ಬೆಲೆ ತೆರಬೇಕಾಗುತ್ತದೆ ಎಂದು ಪಾಕ್ ರೇಂಜರ್ ಗಳಿಗೆ ಭಾರತದ ಕಮಾಂಡರ್ ಗಳು ಎಚ್ಚರಿಸಿದ್ದಾರೆ.