ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಅನ್ಬಾಝಗನ್ ಅವರು ವೃದ್ಧೆಯ ಮನೆಗೆ ಭೇಟಿ ನೀಡಿದ್ದಾರೆ. ಅಧಿಕಾರಿಯನ್ನು ಕಂಡ ವೃದ್ಧ ಮಹಿಳೆ ಗಾಬರಿಗೊಂಡಿದ್ದಾರೆ. ಈ ವೇಳೆ ಸಮಾಧಾನ ಪಡಿಸಿರುವ ಅನ್ಬಾಝಗನ್ ಅವರು, ಕೈಯಲ್ಲಿ ಹಿಡಿದ ಊಟವನ್ನು ಕೆಳಗಿಟ್ಟು, ಬಾಳೆಎಲೆಯನ್ನು ತರುವಂತೆ ತಿಳಿಸಿದ್ದಾರೆ. ಬಳಿಕ ಮಹಿಳೆಯ ಎದುರಿಗೆ ನೆಲದ ಮೇಲೆ ಕುಳಿತು ಎಲೆಗಳನ್ನು ಹಾಕಿ ಊಟವನ್ನು ಬಡಿಸಿದ್ದಾರೆ. ನಂತರ ವೃದ್ಧೆಯ ಜೊತೆಗೇ ಅಧಿಕಾರಿ ಕೂಡ ಊಟವನ್ನು ಮಾಡಿದ್ದಾರೆ.