ಬಳಿಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ದ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಅಂದು ಅಂಬೇಡ್ಕರ್ ಅವರನ್ನು ಒಂದಲ್ಲ ಎರಡು ಬಾರಿ ಸೋಲಿಸಿತ್ತು. ಕ್ಷುಲ್ಲಕ ಕಾರಣಗಳನ್ನು ನೀಡಿ ಕೇಂದ್ರದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಹಾಕದಂತೆ ಮಾಡಿತು. ಅಲ್ಲದೆ, ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ನಿರಾಕರಿಸಿತ್ತು. ಕಾಂಗ್ರೆಸ್ ಅವರ ಋಣಾತ್ಮಕ ರಾಜಕೀಯವನ್ನು ಭಾರತ ನೋಡಿದೆ ಎಂದು ತಿಳಿಸಿದ್ದಾರೆ.