ಸಕ್ಕರೆ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಮಿಲ್ ಗಳು ರೈತರಿಗೆ ಸೂಕ್ತ ಬೆಲೆ ನೀಡಲು ಸಾಧ್ಯವಾಗಲಿಲ್ಲ ಎಂದು ವ್ಯಾಪಾರ ಸಂಸ್ಥೆ ತಿಳಿಸಿದೆ. ಉತ್ತರ ಪ್ರದೇಶದಲ್ಲಿರುವ ಮಿಲ್ ಗಳು 72 ಬಿಲಿಯನ್ ರೂಪಾಯಿಯಷ್ಟು ರೈತರಿಗೆ ಬಾಕಿ ಮೊತ್ತ ನೀಡಬೇಕಿದ್ದು, ಮಹಾರಾಷ್ಟ್ರದ ಮಿಲ್ ಗಳು 25 ಬಿಲಿಯನ್ ನಷ್ಟು ರೈತರಿಗೆ ಬಾಕಿ ಮೊತ್ತ ನೀಡಬೇಕಿದೆ ಎಂದು ಐಎಸ್ಎಂಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.