ಶಾಸಕ ಅಮನ್ಮಣಿ ತ್ರಿಪಾಠಿಯವರು ನನ್ನ ಭೂಮಿಯನ್ನು ಕಬಳಿಸಿದ್ದರು. ಹೀಗಾಗಿ ಸಾಕ್ಷ್ಯಾಧಾರ ಹಾಗೂ ದಾಖಲೆಗಳನ್ನು ತೆಗೆದುಕೊಂಡು ಜನತಾ ದರ್ಬಾರ್ ವೇಳೆ ಯೋಗಿ ಆದಿತ್ಯನಾಥ್ ಅವರಿಗೆ ದೂರು ನೀಡಲು ಹೋಗಿದ್ದೆ. ದೂರು ಪತ್ರ ನೀಡುತ್ತಿದ್ದಂತೆಯೇ ಯೋಗಿ ಆದಿತ್ಯನಾಥಅ ಅವರು ಪತ್ರಗಳನ್ನು ಎಸೆದು, ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಹೇಳಿ ನನ್ನನ್ನು ತಳ್ಳಿದರು ಎಂದು ಹೇಳಿದ್ದಾರೆ.