ಹಜ್ ಭವನ, ಬಸ್ ಹಾಗೂ ಶಾಲಾ ಪಠ್ಯಪುಸ್ತಕಗಳಿಗೆ ಕೇಸರಿ ಬಣ್ಣವನ್ನು ನೀಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಇದೀಗ ಅಂಬೇಡ್ಕರ್ ಅವರ ಪುತ್ಥಳಿಗೂ ಕೇಸರಿ ಬಣ್ಣವನ್ನು ಬಳಿದಿದ್ದು, ಹೊಸ ವಿವಾದವನ್ನು ಹುಟ್ಟುಹಾಕಿದಂತಾಗಿದೆ...
ಲಖನೌ: ಹಜ್ ಭವನ, ಬಸ್ ಹಾಗೂ ಶಾಲಾ ಪಠ್ಯಪುಸ್ತಕಗಳಿಗೆ ಕೇಸರಿ ಬಣ್ಣವನ್ನು ನೀಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಇದೀಗ ಅಂಬೇಡ್ಕರ್ ಅವರ ಪುತ್ಥಳಿಗೂ ಕೇಸರಿ ಬಣ್ಣವನ್ನು ಬಳಿದಿದ್ದು, ಹೊಸ ವಿವಾದವನ್ನು ಹುಟ್ಟುಹಾಕಿದಂತಾಗಿದೆ.
ಕೆಲ ದಿನಗಳ ಹಿಂದಷ್ಟೇ ಬದೌನ್ ಜಿಲ್ಲೆಯಲ್ಲಿ ದುಷ್ಕರ್ಮಿಗಳ ಪುಂಡಾಟಿಕೆಗೆ ಅಂಬೇಡ್ಕರ್ ಅವರ ಪ್ರತಿಮೆ ಧ್ವಂಸಗೊಂಡಿತ್ತು. ಬಳಿಕ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದ್ದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮಂಡಳಿ ಪ್ರತಿಮೆಯನ್ನು ಮರು ನಿರ್ಮಾಣ ಮಾಡಿ, ಭಾನುವಾರವಷ್ಟೇ ಅನಾವರಣಗೊಳಿಸಿತ್ತು.
ಸಾಮಾನ್ಯವಾಗಿ ಪ್ರತಿಮೆ ಹಾಗೂ ಭಾವಚಿತ್ರ ಅಂಬೇಡ್ಕರ್ ಅವರ ಕೋಟು ಕಪ್ಪು ಅಥವಾ ನೀಲಿ ಬಣ್ಣದಲ್ಲಿರುತ್ತದೆ. ಆದರೆ, ಅಂಬೇಡ್ಕರ್ ಅವರ ಈ ಪ್ರತಿಮೆ ಕೇಸರಿ ಬಣ್ಣದಲ್ಲಿದಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.