ಕತುವಾ ಅತ್ಯಾಚಾರ ಸಂತ್ರಸ್ತೆ ಸತ್ತಿದ್ದು ಒಳ್ಳೆಯದೇ ಆಯಿತು ಎಂದ ಬ್ಯಾಂಕ್ ಅಧಿಕಾರಿ ವಜಾ

ಜಮ್ಮು ಮತ್ತು ಕಾಶ್ಮೀರದ ಬಾಲಕಿ ಅತ್ಯಾಚಾರ ಮತ್ತು ಹತ್ಯೆ ಸಮರ್ಥಿಸಿ ಕೇರಳದ ಕೋಟಕ್ ಮಹಿಂದ್ರಾ ಬ್ಯಾಂಕ್ ನೌಕರನೋರ್ವ ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ತಿರುವನಂತಪುರ; ಜಮ್ಮು ಮತ್ತು ಕಾಶ್ಮೀರದ ಬಾಲಕಿ ಅತ್ಯಾಚಾರ ಮತ್ತು ಹತ್ಯೆ ಸಮರ್ಥಿಸಿ ಕೇರಳದ ಕೋಟಕ್ ಮಹಿಂದ್ರಾ ಬ್ಯಾಂಕ್ ನೌಕರನೋರ್ವ ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. 
ಕತುವಾ ಅತ್ಯಾಚಾರ ಪ್ರಕರಣ ಕುರಿತಂತೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ಗೋಡೆಯಲ್ಲಿ ಬಾಂಕ್ಯ್ ನ ಸಹಾಯಕ ಮ್ಯಾನೇಜರ್ ಆಗಿದ್ದ ನಂದಾ ಕುಮಾರ್ ಎಂಬುವವರು ಬರೆದುಕೊಂಡಿದ್ದರು. ಕತುವಾ ಬಾಲಕಿ ಹತ್ಯೆ ಒಳ್ಳೆಯದೇ. ಇಲ್ಲದಿದ್ದರೆ ನಾಳೆ ಆಕೆ ಭಾರತಕ್ಕೆ ಬಾಂಬ್ ಹಾಕುತ್ತಿದ್ದಳು ಎಂದು ಹೇಳಿದ್ದರು. 
ಈ ಹೇಳಿಕೆ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಬಳಿಕ ಡಿಸ್ಮಿಸ್ ಯುವರ್ ಮ್ಯಾನೇಜರ್ ಎಂಬ ಹ್ಯಾಷ್ ಟ್ಯಾಗ್ ನಡಿ ಸಾಕಷ್ಟು ಮಂದಿ ಕೋಟಕ್ ಬ್ಯಾಂಕ್'ಗೆ ಆಗ್ರಹಿಸಿದ್ದರು. 
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬ್ಯಾಂಕ್ ಇದೀಗ ನಂದಾ ಕುಮಾರ್ ಅವರನ್ನು ವಜಾಗೊಳಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com