ಚತ್ತೀಸ್ ಗಢದಲ್ಲಿರುವ ಆದಿವಾಸಿ ಮಹಿಳೆಯರು ತೆಂಡು ಎಲೆ ಕೀಳುವುದಕ್ಕಾಗಿ ಕಾಡುಗಳಲ್ಲಿ ಓಡಾಡುತ್ತಾರೆ, ಆದರೆ ಹಲವು ಬಾರಿ ಅವರ ಬಳಿ ಪಾದರಕ್ಷೆ ಇರುವುದಿಲ್ಲ, ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಆದಿವಾಸಿ(ಬುಡಕಟ್ಟು) ಮಹಿಳೆಯರಿಗೆ ಪಾದರಕ್ಷೆಗಳನ್ನು ನೀಡುವುದಕ್ಕಾಗಿ ಚರಣ್-ಪಾದಿಕಾ ಯೋಜನೆ ಜಾರಿಗೊಳಿಸಿದೆ. ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ ಸ್ವತಃ ಸ್ವತಃ ತಾವೇ ಪಾದರಕ್ಷೆ ತೊಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.