ಉತ್ತರ ಪ್ರದೇಶ ಮಹಿಳೆಯರ ಪಾಲಿಗೆ ರಾವಣರಾಜ್ಯವಾಗಿ ಬದಲಾಗಿದ್ದು. ಇಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ದಲಿತರು, ರೈತರು ಬಿಜೆಪಿ ಆಡಳಿತದಲ್ಲಿ ನರಕ ಅನುಭವಿಸುತ್ತಿದ್ದು, ಬಿಜೆಪಿ ಸರ್ಕಾರ ಅತ್ಯಾಚಾರಿಗಳಿಗೆ ತನ್ನ ರಕ್ಷಣೆ ಮುಂದುವರೆಸಿದೆ. ಯೋಗಿ ಆದಿತ್ಯಾನಾತ್ ಸರ್ಕಾರಕ್ಕೆ ಅತ್ಯಾಚಾರಿಗಳನ್ನು ರಕ್ಷಿಸುವ ಮತ್ತು ಸಂತ್ರಸ್ಥರನ್ನು ಅವಮಾನಿಸುವ ಕಲೆ ತುಂಬಾ ಚೆನ್ನಾಗಿ ಕರಗತವಾಗಿದೆ. ಅತ್ಯಾಚಾರಿಗಳ ಬೆಂಬಲಿಸಿ ಪ್ರಕರಣದಲ್ಲಿ ಪಿತೂರಿ ನಡೆಸಲಾಗಿದೆ ಎಂಬ ಆರೋಪ ಮಾಡುತ್ತಿದೆ.