ಸುಳ್ಳು ಕೇಸು ದಾಖಲಿಸಿ ನಮ್ಮನ್ನು ಜೈಲಿಗಟ್ಟದೇ ಇದ್ದರೆ, ಖಂಡಿತ ಬಿಜೆಪಿ ಸೊಂಟ ಮುರಿಯುತ್ತೇವೆ: ಜಿಗ್ನೇಶ್ ಮೇವಾನಿ

ಗುಜರಾತ್ ಸರ್ಕಾರ ನಮ್ಮ ಮೇಲೆ ಸುಳ್ಳು ಕೇಸು ದಾಖಲಿಸಿ ಜೈಲಿಗಟ್ಟದೇ ಇದ್ದರೆ ಖಂಡಿತಾ ಬಿಜೆಪಿ (ಬಲಾತ್ಕಾರಿ ಜಾನ್ ಲೇವಾ ಪಾರ್ಟಿ) ಸೊಂಟ ಮುರಿಯುತ್ತೇವೆ ಎಂದು ಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಹ್ಮದಾಬಾದ್: ಗುಜರಾತ್ ಸರ್ಕಾರ ನಮ್ಮ ಮೇಲೆ ಸುಳ್ಳು ಕೇಸು ದಾಖಲಿಸಿ ಜೈಲಿಗಟ್ಟದೇ ಇದ್ದರೆ ಖಂಡಿತಾ ಬಿಜೆಪಿ (ಬಲಾತ್ಕಾರಿ ಜಾನ್ ಲೇವಾ ಪಾರ್ಟಿ) ಸೊಂಟ ಮುರಿಯುತ್ತೇವೆ ಎಂದು ಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
ಪಟೇಲ್ ಸುಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ನೀಡಲಾಗಿದ್ದ ಭದ್ರತೆಯನ್ನು ಗುಜರಾತ್ ಸರ್ಕಾರ ವಾಪಸ್ ಪಡೆದ ಹಿನ್ನಲೆಯಲ್ಲಿ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜಿಗ್ನೇಶ್ ಮೇವಾನಿ, ಟ್ವೀಟರ್ ನಲ್ಲಿ ಟ್ವೀಟ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
'ಹಾರ್ದಿಕ್ ಪಟೇಲ್ ಅವರ ಭದ್ರತೆಯನ್ನು ವಾಪಸ್ ಪಡೆದಿರುವ ಗುಜರಾತ್ ಸರ್ಕಾರದ ನಿರ್ಧಾರದ ಹಿಂದೆ ಬಹುದೊಡ್ಡ ಷಡ್ಯಂತ್ರ ಅಡಗಿದ್ದು, ಹಾರ್ದಿಕ್ ಮೇಲೆ ಸುಳ್ಳು ಕೇಸು ದಾಖಲಿಸಿ ಜೈಲಿಗಟ್ಟುವ ಅಥವಾ ಅವರ ಮೇಲೆ ದಾಳಿ ಮಾಡಿಸುವ ಹುನ್ನಾರ ಇರಬಹುದು. ನಮ್ಮ ಆತ್ಮ ಮತ್ತು ದೇಹ ಜೀವಂತವಾಗಿದ್ದರೆ, ನಮ್ಮ ಮೇಲೆ ಯಾವುದೇ ಸುಳ್ಳು ಪ್ರಕರಣಗಳನ್ನು ದಾಖಲಿಸದೇ ಇದ್ದರೆ ಖಂಡಿತಾ ನಾನು ಆಣೆ ಮಾಡಿ ಹೇಳುತ್ತೇನೆ ಈ ಬಿಜೆಪಿ (ಬಲಾತ್ಕಾರಿ ಜಾನ್ ಲೇವಾ ಪಾರ್ಟಿ) ಪಕ್ಷದ ಸೊಂಟ ಮುರಿಯುತ್ತೇವೆ ಎಂದು ಮೇವಾನಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com