ಲಖನೌ: ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದಲ್ಲಿ ರಾಜಕೀಯ ಅಸ್ವಿತ್ವದಲ್ಲಿದ್ದು, ದೇವರುಗಳಾದ ರಾಮ, ಕೃಷ್ಣ ಸಹ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಉತ್ತರ ಪ್ರದೇಶದ ಲಖನೌದಲ್ಲಿಂದು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ರಾಜನಾಥ್ ಸಿಂಗ್, ರಾಜಕೀಯ ಉದ್ದೇಶದಿಂದಲೇ ರಾಮ ರಾಜ್ಯ ನಿರ್ಮಾಣ ಮಾಡಿದ್ದ ಎಂದರು.
ರಾಮ ರಾಜಕೀಯದೊಂದಿಗೆ ಉತ್ಕಟ ಭಕ್ತಿ ಹೊಂದಿದ್ದ ಎಂದು ರಾಜನಾಥ್ ಸಿಂಗ್ ತಿಳಿಸಿದರು.
ರಾಜನಾಥ್ ಸಿಂಗ್ ತಮ್ಮ ಸ್ವಕ್ಷೇತ್ರವಾದ ಲಖನೌಕ್ಕೆ ಎರಡು ದಿನಗಳ ಭೇಟಿ ನೀಡಿದ್ದಾರೆ
Advertisement