ಈ ಮಾಹಿತಿಯನ್ನು ಸ್ವತಃ ಡಿಎಂ ಕೆ ಪಕ್ಷವೇ ನೀಡಿದ್ದು, ಕರುಣಾನಿಧಿ ಅವರ ಆರೊಗ್ಯಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರು ಯಾವುದೇ ಅನಾಹುತ ಮಾಡಿಕೊಳ್ಳಬಾರದು ಎಂದು ಡಿಎಂಕೆ ಹೇಳಿದೆ. ಕರುಣಾನಿಧಿ ಅವರ ಅನಾರೋಗ್ಯ ಸುದ್ದಿಯನ್ನು ಕೇಳಿ ನಮ್ಮ ಪಕ್ಷದ 21 ಕಾರ್ಯಕರ್ತರು ಸಾವನ್ನಪ್ಪಿರುವುದನ್ನು ತಿಳಿದು ನೋವುಂಟಾಗಿದೆ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂಕೆ ಸ್ಟ್ಯಾಲಿನ್ ಹೇಳಿದ್ದಾರೆ.