ಒಡಿಶಾ: ಅನಾಥ ಶವಕ್ಕೆ ಅಂತ್ಯಸಂಸ್ಕಾರ- ಮಾನವೀಯತೆ ಮೆರೆದ ಶಾಸಕ!

ಸಮುದಾಯದಿಂದ ಬಹಿಷ್ಕರಿಸಲ್ಪಟ್ಟಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಸಾವನ್ನಪ್ಪಿದ್ದ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಯಾರೊಬ್ಬರೂ ಮುಂದಕ್ಕೆ ಬಾರದ ಹಿನ್ನಲೆಯಲ್ಲಿ ಶಾಸಕರೊಬ್ಬರು ಅಂತಿಮ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ...
ಒಡಿಶಾ: ಅನಾಥ ಶವಕ್ಕೆ ಅಂತ್ಯಸಂಸ್ಕಾರ- ಮಾನವೀಯತೆ ಮೆರೆದ ಶಾಸಕ!
ಒಡಿಶಾ: ಅನಾಥ ಶವಕ್ಕೆ ಅಂತ್ಯಸಂಸ್ಕಾರ- ಮಾನವೀಯತೆ ಮೆರೆದ ಶಾಸಕ!
Updated on
ಜಾರ್ಸಗುಡಾ: ಸಮುದಾಯದಿಂದ ಬಹಿಷ್ಕರಿಸಲ್ಪಟ್ಟಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಸಾವನ್ನಪ್ಪಿದ್ದ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಯಾರೊಬ್ಬರೂ ಮುಂದಕ್ಕೆ ಬಾರದ ಹಿನ್ನಲೆಯಲ್ಲಿ ಶಾಸಕರೊಬ್ಬರು ಅಂತಿಮ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ. 
ರೆಂಗಾಲಿ ಕ್ಷೇತ್ರದ ಬಿಜೆಡಿ ಶಾಸಕ ರಮೇಶ್ ಪಟುವಾ ಅನಾಥ ಶವಕ್ಕೆ ಅಂತ್ಯ ಸಂಸ್ಕಾರ ನೆರವೇರಿಸಿದವರಾಗಿದ್ದಾರೆ. 
ಮಹಿಳೆಯನ್ನು ಆಕೆಯ ಸಮುದಾಯದ ನಾಯಕರು ಬಹಿಷ್ಕರಿಸಿದ್ದರು. ಭಿಕ್ಷೆ ಬೇಡಿಕೊಂಡು ಜೀವನ ನಡೆಸುತ್ತಿದ್ದ ಮಹಿಳೆ, ತನ್ನ ಭಾವನೊಂದಿಗಿದ್ದಳು. ಆದರೆ, ಕೆಲ ದಿನಗಳ ಹಿಂದಷ್ಟೇ ಆಕಸ್ಮಿಕವಾಗಿ ಸಾವನ್ನಪ್ಪಿದ್ದಳು. ಮಹಿಳೆಯ ಭಾವ ಅನಾರೋಗ್ಯದಿಂದ ನಿತ್ರಾಣಗೊಂಡಿದ್ದು, ಕುಟುಂಬದವರೂ ಕೂಡ ಜೊತೆಗಿರಲಿಲ್ಲ. 
ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಊರಿನ ಜನರಾರೂ ಮುಂದಕ್ಕೆ ಬಂದಿಲ್ಲ. ಸಾವಿನಲ್ಲಿ ಮಾನವೀಯತೆ ಮೆರೆಯಬೇಕಿದ್ದ ಜನರು ಜಾತಿ, ನಂಬಿಕೆ, ಭಯದಿಂದ ದೂರ ಉಳಿದಿದ್ದರು. 
ಈ ವಿಚಾರ ತಿಳಿದ ಶಾಸಕ ರಮೇಶ್ ಅವರು, ತಮ್ಮ ಪುತ್ರ ಹಾಗೂ ಸೋದರಳಿಯನನ್ನು ಸ್ಥಳಕ್ಕೆ ಕರೆದು ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com